ಜಿನೆವಾ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ಕ್ರಮ ಮನ್ನಣೆಗೆ ಪಾತ್ರವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಪಾಕಿಸ್ಥಾನದ ಹೋರಾಟಗಾರರು ಮತ್ತು ಪತ್ರಕರ್ತರು, ಯುರೋಪಿಯನ್ ಸಂಸದರು ಮತ್ತು ವಿದೇಶಿ ತಜ್ಞರು ಸೋಮವಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ಭಾರತದ ಕ್ರಮವನ್ನುವಿಶ್ವಸಂಸ್ಥೆಯಲ್ಲಿ ಶ್ಲಾಘಿಸಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ(ಯುಎನ್ಹೆಚ್ಆರ್ಸಿ)ಯಲ್ಲಿ ನಡೆಯುತ್ತಿರುವ 43ನೇ ಅಧಿವೇಶನದ ಸಂದರ್ಭದಲ್ಲಿ ಜಿನೆವಾ ಪ್ರೆಸ್ ಕ್ಲಬ್ನಲ್ಲಿ ‘Jammu and Kashmir: Sifting facts from fiction’ ಎಂಬ ಕಾರ್ಯಕ್ರಮ ನಡೆಯಿತು.
ಇದರಲ್ಲಿ ಭಾಗಿಯಾಗಿದ್ದ ಯುರೋಪಿಯನ್ ಸಂಸತ್ತಿನ ಮಾಜಿ ಸದಸ್ಯ ನಾಥನ್ ಗಿಲ್ ಭಾರತ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದರು. “ಕೇಂದ್ರಾಡಳಿತ ಪ್ರದೇಶವು ಹೊಸ ಉದಯವನ್ನು ಕಂಡಿದೆ ಮತ್ತು ಇಲ್ಲಿನ ಜನರು ತಮ್ಮನ್ನು ತಾವು ಭಾರತದಲ್ಲಿನ ಸಮಾನ ಪ್ರಜೆಗಳಾಗಿ ನೋಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“370ನೇ ವಿಧಿಯನ್ನು ರದ್ದುಪಡಿಸುವುದರಿಂದ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ತಮ್ಮ ಹಕ್ಕುಗಳಿಗಾಗಿ ಹೆಚ್ಚು ಹೆಚ್ಚು ಬೇಡಿಕೆಯಿಡುತ್ತಾರೆ ಮತ್ತು ಭಾರತೀಯ ಸಮುದಾಯದೊಂದಿಗೆ ತಮ್ಮನ್ನು ಮರುಸಂಘಟಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ, ಪಾಕಿಸ್ಥಾನವು ಕಾಶ್ಮೀರವನ್ನು ಹೇಗೆ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂಬುದನ್ನು ಬಹಿರಂಗಪಡಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಮತ್ತೊಂದು ವೀಡಿಯೊದಲ್ಲಿ, ನಕಲಿ ಸುದ್ದಿಗಳನ್ನು ಹರಡುವ ಮೂಲಕ ಪಾಕಿಸ್ಥಾನವು ಕೋಮು ಸಂಘರ್ಷವನ್ನು ಸೃಷ್ಟಿಸಲು ಮಾಡುತ್ತಿರುವ ಕಾರ್ಯವನ್ನು ಎತ್ತಿ ತೋರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.