ಮಂಗಳೂರು: ಯಕ್ಷಗಾನವನ್ನು ದಕ್ಷಿಣ ಕನ್ನಡದ ಗಂಡುಕಲೆ ಎಂದೇ ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಗಂಡು ಕಲೆಯತ್ತ ಹೆಣ್ಣು ಮಕ್ಕಳು ಕೂಡ ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ಯಕ್ಷಗಾನದಲ್ಲಿ ಹೆಸರು ಮಾಡಿರುವ ಹಲವು ಮಹಿಳೆಯರು ನಮ್ಮ ಮುಂದೆ ಇದ್ದಾರೆ. ಆದರೆ ಮುಸ್ಲಿಂ ಹೆಣ್ಣು ಮಗಳೊಬ್ಬಳು ಎಲ್ಲಾ ಕಟ್ಟುಪಾಡುಗಳ ನಡುವೆಯೂ ಯಕ್ಷಗಾನ ಕ್ಷೇತ್ರದಲ್ಲಿ ಮಿಂಚು ಹರಿಸುತ್ತಿದ್ದಾರೆ.
‘ತನು ವಿಟ್ಲ’ ಎಂಬ ಹೆಸರಿನಿಂದಲೇ ಖ್ಯಾತರಾಗಿರುವ ಆರ್ಶಿಯಾ ಅವರು ಬಂಟ್ವಾಳ ತಾಲೂಕಿನ ವಿಟ್ಲದವರು. ವರ್ಷಗಳಿಂದ ಅವರು ಯಕ್ಷಗಾನದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಹಲವು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ಅವರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗಳನ್ನೂ ಅವರು ಗಿಟ್ಟಿಸಿದ್ದಾರೆ.
ಪಡೀಲ್ನ ಟೊಯೋಟ ಶೋರೂಂನಲ್ಲಿ ಉದ್ಯೋಗಿ ಆಗಿರುವ ಅವರು, ಚಿಕ್ಕ ವಯಸ್ಸಿನಲ್ಲೇ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರ ಪಾತ್ರವನ್ನು ಮಾಡಿದ್ದರು. ಇದು ಅವರನ್ನು ಯಕ್ಷಗಾನ ರಂಗದತ್ತ ಸೆಳೆಯಿತು. ಯಕ್ಷಗಾನದ ಚೆಂಡೆ, ಪ್ರವೇಶ ನನ್ನನ್ನು ಯಕ್ಷರಂಗಕ್ಕೆ ಇನ್ನಿಲ್ಲದಂತೆ ಸೆಳೆಯಿತು ಎಂದು ಆರ್ಶಿಯಾ ಹೇಳುತ್ತಾರೆ.
ವಿಟ್ಲದ ಜೇಸೀಸ್ ಇಂಗ್ಲಿಷ್ ಮಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕ ದಿನಾಚರಣೆಗಾಗಿ ತನಗೆ ಯಕ್ಷಗಾನವನ್ನು ಕಲಿಸಿದ ಶಾಲಾ ಶಿಕ್ಷಕರು ನನಗೆ ಸ್ಫೂರ್ತಿ ಎಂದು ಆರ್ಶಿಯಾ ನೆನಪಿಸಿಕೊಳ್ಳುತ್ತಾರೆ. 10 ನೇ ವಯಸ್ಸಿನಲ್ಲಿ, ಅರ್ಶಿಯಾ ತನ್ನ ಸ್ಥಳೀಯ ಸ್ಥಳವಾದ ವಿಟ್ಲದಲ್ಲಿ ಯಕ್ಷಗಾನವನ್ನು ಮಾಡಲು ಪ್ರಾರಂಭಿಸಿದರು.
“ಮುಸ್ಲಿಂ ಆಗಿರುವುದರಿಂದ ನಾನು ಯಕ್ಷಗಾನಕ್ಕೆ ಹೋಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನನ್ನ ಶಾಲಾ ದಿನಗಳಲ್ಲಿ ಇತರ ವಿದ್ಯಾರ್ಥಿಗಳು ಪ್ರದರ್ಶನ ನೀಡಿದಾಗ, ಅವರು ಪ್ರದರ್ಶನವನ್ನು ನೋಡುವ ಮೂಲಕ ನಾನು ಕಲಾ ಪ್ರಾಕಾರವನ್ನು ಕಲಿತೆ” ಎಂದು ಅವರು ಹೇಳುತ್ತಾರೆ.
ರಮೇಶ್ ಭಟ್ ನೇತೃತ್ವದಲ್ಲಿ ಮಂಗಳೂರಿನ ಕಡಲಿ ಕಲಾ ಕೇಂದ್ರದಲ್ಲಿ ಅರ್ಶಿಯಾ ಯಕ್ಷಗಾನವನ್ನು ಕಲಿಯುತ್ತಿದ್ದಾಳೆ. ಅಸುರರ ಪಾತ್ರಗಳಲ್ಲಿ ಅವರು ಪರಿಣಿತಿ ಪಡೆದುಕೊಂಡಿದ್ದಾರೆ. ವಿಶೇಷವಾಗಿ ಪ್ರವೇಶ ಪಾತ್ರಗಳನ್ನು ಯಾವಾಗಲೂ ಪ್ರೀತಿಸುವುದಾಗಿ ಅವರು ಹೇಳಿಕೊಳ್ಳುತ್ತಾರೆ. ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಅರ್ಶಿಯಾ ನಿಷಂಭಾಸುರ, ರಕ್ತ ಬೀಜಾಸುರ ಮತ್ತು ಮಹಿಷಾಸುರ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಆಕೆಯ ಕುಟುಂಬವು ಅವರಿಗೆ ಬೆಂಬಲವಾಗಿ ನಿಂತಿದೆ. ಆದರೆ ಅವರ ಸಮುದಾಯದ ಕೆಲವರು ಅವರನ್ನು ಬೆಂಬಲಿಸಲಿಲ್ಲ, ಬದಲಾಗಿ ಅವರಿಗೆ ತೊಂದರೆಗಳನ್ನು ಕೊಡಾರಂಭಿಸಿದರು. ಆದರೆ ಆರ್ಶಿಯಾ ಅದಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ. ಯಶಸ್ವಿ ಯಕ್ಷಗಾನ ಕಲಾವಿದೆ ಆಗಿರುವ ಆಕೆ ಮಂಗಳೂರು, ಕಾರವಾಡ ಮತ್ತು ಉಡುಪಿಯಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ.
”ನನಗೆ ದೊಡ್ಡ ಧ್ವನಿ ಇರುವುದರಿಂದ, ಅಸುರರ ಪಾತ್ರದ ನನಗೆ ಸರಿಹೊಂದುತ್ತದೆ ಎಂಬುದು ಹಲವರ ನಂಬಿಕೆ. ಆದರೆ ನಾನು ಯಕ್ಷಗಾನದಲ್ಲಿ ಪ್ರವೇಶವನ್ನು ಹೆಚ್ಚು ಪ್ರೀತಿಸುತ್ತೇನೆ. ನನ್ನ ಮುಂದಿನ ಗುರಿ ಚೆಂಡೆ ವಾದ್ಯವನ್ನು ಕಲಿಯುವುದು. ನಾನು ಶ್ರೀನಿವಾಸ ಕಲ್ಯಾಣ, ಸುದರ್ಶನೋಪಕ್ಯಾನ, ಕದಂಬ ಕೌಶಿಕ, ಶಾಂಭವಿ ವಿಜಯ, ರಕ್ತಬೀಜಾಸುರ ವಧೆ ಮತ್ತು ಇನ್ನೂ ಅನೇಕ ಪ್ರಸಂಗಗಳಲ್ಲಿ ಭಾಗಿಯಾಗಿದ್ದೇನೆ”ಎಂದು ಅವರು ಹೇಳಿದ್ದಾರೆ.
“ಪಟ್ಲ ಸತೀಶ್ ಶೆಟ್ಟಿ ಅವರ ಮುಂದೆ ನನ್ನನ್ನು ಸನ್ಮಾನಿಸಿದ್ದು ಮತ್ತು ಅವರು ನನ್ನನ್ನು ಆಶೀರ್ವದಿಸಿದ್ದು ನನಗೆ ಅತ್ಯಂತ ಸ್ಮರಣೀಯ ಕ್ಷಣವಾಗಿದೆ” ಎಂದು ಅರ್ಶಿಯಾ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.