ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡದ ಧರ್ಮಸ್ಥಳ ಬಳಿಯ ಸೇವಾಭಾರತಿ ಕನ್ಯಾಡಿಗೆ 6ನೇ ಉತ್ತಿಷ್ಟ ಸೇವಾ ಪುರಾಸ್ಕರ್ 2020 ಅನ್ನು ಪ್ರದಾನಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಡೆಗಣಿಸಲ್ಪಟ್ಟ ವರ್ಗದ ಜನರಿಗೆ ನೀಡಿದ ಸಾಮಾಜಿಕ ಸೇವೆಯನ್ನು ಗುರುತಿಸಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
2004ರಲ್ಲಿ ರಚನೆಗೊಂಡ ‘ಸೇವಾಭಾರತಿ ಕನ್ಯಾಡಿ’ಯು ಆರೋಗ್ಯ, ಶಿಕ್ಷಣ, ಕೃಷಿ, ಗ್ರಾಮೀಣ ಮಹಿಳೆಯರ ಸ್ವ-ಉದ್ಯೋಗ, ಸಬಲೀಕರಣ, ನೈತಿಕ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ. ಇದು ಕಳೆದ 16 ವರ್ಷಗಳಲ್ಲಿ ಸಾಮಾಜಿಕ ಕಾರ್ಯ ಮತ್ತು ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಕ್ಕಳು, ವಿಶೇಷ ಸಾಮರ್ಥ್ಯವಿರುವ ಮಕ್ಕಳಿಗೆ ಸಹಾಯ ಮಾಡುವುದು ಮತ್ತು ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ‘ಸೇವಧಾಮ’ ಎಂಬ ಸಾಮಾಜಿಕ ಪುನಃಶ್ಚೇತನ ಕೇಂದ್ರವನ್ನೂ ಇದು ನಡೆಸುತ್ತಿದೆ.
ಸಮಾಜದ ವಿವಿಧ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವಿವಿಧ ಯೋಜನೆಗಳನ್ನು ಇದು ಹೊಂದಿದೆ. ಅವುಗಳೆಂದರೆ:
1. ಆರೋಗ್ಯಭಾರತಿ: ರಕ್ತದಾನ ಶಿಬಿರವನ್ನು ಆಯೋಜಿಸುವುದು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವುದು.
2. ಬಾಲಭಾರತಿ: ವ್ಯಕ್ತಿತ್ವ ಮತ್ತು ಕೌಶಲ್ಯ ಅಭಿವೃದ್ಧಿಗೆ ಮಕ್ಕಳಿಗೆ ತರಬೇತಿ ನೀಡುವುದು.
3. ಯಕ್ಷಭಾರತಿ: ಯಕ್ಷಗಾನ ಪ್ರಚಾರ ಮತ್ತು ಪ್ರೋತ್ಸಾಹ.
4. ಶ್ರೀ ದುರ್ಗಾಮಾತೃ ಮಂಡಳಿ: ಗ್ರಾಮೀಣ ಪ್ರದೇಶದ ಗ್ರಾಮೀಣ ಮಹಿಳೆಯರ ಸಬಲೀಕರಣ.
5. ಸೇವಾಧಾಮ: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಪುನಃಶ್ಚೇತನ ಕೇಂದ್ರ.
ಈ ಸೇವೆಯನ್ನು ಗುರುತಿಸಿಯೇ ಈ ಸಂಸ್ಥೆಗೆ ‘ಉತ್ತಿಷ್ಟ ಪುರಸ್ಕಾರ’ವನ್ನು ಪ್ರದಾನಿಸಲಾಗಿದೆ.
ಸಾಮಾಜಿಕ ಸೇವೆ ಮತ್ತು ಚಾರಿಟಬಲ್ ಟ್ರಸ್ಟ್ ಆಗಿರುವ ಉತ್ತಿಷ್ಟ 2006ರಲ್ಲಿ ಪ್ರಾರಂಭಿಸಿದ ಪ್ರಶಸ್ತಿಯೇ ಉತ್ತಿಷ್ಟ ಸೇವಾ ಪುರಸ್ಕಾರ. ಸಮಾಜದ ದುರ್ಬಲ ವರ್ಗಗಳನ್ನು ಉನ್ನತೀಕರಿಸಲು ತಮ್ಮದೇ ಆದ ರೀತಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ದತ್ತಿ ಸಂಸ್ಥೆಗಳನ್ನು ಪುರಸ್ಕರಿಸಲು ಮತ್ತು ಬೆಂಬಲಿಸಲು ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಗಿದೆ. ಈ ಪ್ರಶಸ್ತಿಯು ಸ್ಮರಣಿಕೆ ಮತ್ತು ಒಂದು ಲಕ್ಷ ರೂಪಾಯಿಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ.
ಇಸ್ರೋ ಮುಖ್ಯಸ್ಥ ಕೆ. ಸಿವನ್ ಅವರು ಈ ಪುರಸ್ಕಾರವನ್ನು ‘ಸೇವಾ ಭಾರತಿ ಕನ್ಯಾಡಿಗೆ’ಗೆ ಪ್ರದಾನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.