ಬಸ್ರೂರು: ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಚಿಗುರು ಮೊಳಕೆಯೊಡೆದಲ್ಲಿ ಮಾತ್ರ ಸ್ವಸ್ಥ ಭಾರತ ನಿರ್ಮಾಣವಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ನ ಉಡುಪಿ ಜಿಲ್ಲಾಧ್ಯಕ್ಷ ಪ್ರಮೋದ್ ಶೆಟ್ಟಿ ಹೇಳಿದರು.
ಬಸ್ರೂರು ನಿವೇದಿತಾ ಪ್ರೌಢಶಾಲೆಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಆಗಮನದ ನೆನಪಿಗಾಗಿ, ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ”ಹೆತ್ತ ತಾಯಿಯಿಂದ ಸ್ಫೂರ್ತಿ ಪಡೆದ ಶಿವಾಜಿ ಹಿಂದವೀ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಮುಂದಾದ. ಅವನೊಳಗಿನ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸುವ ಕೆಲಸವನ್ನು ಮಾಡಿದ್ದು ಅಕೆ ನೀಡಿದ ಸಂಸ್ಕಾರಗಳೇ. ಇಂತಹ ಸಂಸ್ಕಾರಗಳು ಮನೆಯಲ್ಲಿ ಮತ್ತು ವಿದ್ಯಾಸಂಸ್ಥೆಗಳಲ್ಲಿ ದೊರೆತರೆ ಮಕ್ಕಳಲ್ಲಿ ದೇಶಪ್ರೇಮ ಜಾಗೃತವಾಗುತ್ತದೆ. ಹೀಗೆ ಜಾಗೃತವಾದ ಮನಸ್ಸು ಹೊಂದಿದ ಯುವಕರ ಪಡೆ ನಮ್ಮಲ್ಲಿದ್ದರೆ ಭಾರತ ವಿಶ್ವಗುರುವಾಗುವುದಕ್ಕೆ ಒಂದು ದಿನ ಸಾಕು” ಎಂದು ನುಡಿದರು.
”ರಾಜಕೀಯ ಬಿಟ್ಟು, ಸ್ವಾರ್ಥವಿಲ್ಲದೆ ತನ್ನನ್ನು ತಾನು ದೇಶಕ್ಕಾಗಿ ಅರ್ಪಿಸಿಕೊಳ್ಳುವ ಮನೋಭಾವ ನಮ್ಮಲ್ಲಿ ಹುಟ್ಟಬೇಕು. ದೇಶ ಕಟ್ಟಬೇಕಾದರೆ ಪ್ರಾಮಾಣಿಕತೆ ಅಗತ್ಯ. ಅಂತಹ ಸಮಾಜ ನಿರ್ಮಾಣವಾದಲ್ಲಿ ಮಾತ್ರ ರಾಷ್ಟ್ರ ಬಲಿಷ್ಠವಾಗುತ್ತದೆ. ಸಂಘಟಿತ ಹೋರಟದಿಂದ ಮಾತ್ರ ಗೆಲುವು ಸಾಧ್ಯ ಮೋಸ, ವಂಚನೆ, ವ್ಯಸನಗಳಿಗೆ ದಾಸರಾದ ಸಮಾಜವನ್ನು ಬಹಿಷ್ಕರಿಸಿ, ದೇಶ ವಿರೋಧಿಗಳನ್ನು ತಿರಸ್ಕರಿಸಿದಲ್ಲಿ ಮಾತ್ರ ನವ ಭಾರತ ನಿರ್ಮಾಣ ಸಾಧ್ಯ. ಆಗಲೇ ವಿಶ್ವದಲ್ಲಿ ಭಾರತಕ್ಕೆ ಮತ್ತಷ್ಟು ಗೌರವ ದೊರೆಯುತ್ತದೆ. ಶಿವಾಜಿಯಲ್ಲಿ ಈ ಎಲ್ಲಾ ಮೌಲ್ಯಗಳಿತ್ತು. ಅಂತಹ ಶಿವಾಜಿಯನ್ನು ಪ್ರೇರಣೆಯಾಗಿಟ್ಟುಕೊಂಡು ನಾವು ರಾಷ್ಟ್ರ ಕಟ್ಟುವುದಕ್ಕೆ ಸಿದ್ಧರಾಗಬೇಕು” ಎಂದು ಅವರು ತಿಳಿಸಿದರು.
ಉದ್ಘಾಟನೆಯನ್ನು ಕುಂದಾಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕ, ಸಿವಿಲ್ ಇಂಜಿನಿಯರ್ ಗುರುರಾಜ್ ರಾವ್ ನೆರವೇರಿಸಿದರು. ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಎಚ್ಪಿಯ ಸಮನ್ವಯ ಮಂಚ್ ಈಶಾನ್ಯ ಭಾರತ್ನ ಸಂದೀಪ್ ಮಹೀಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು. ಉಮೇಶ್ ಆಚಾರ್ಯ ಧನ್ಯವಾದ ಸಮರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.