ಲಾಹೋರ್: ಕಾಶ್ಮೀರ ದಿನಾಚರಣೆಯ ಸಂದರ್ಭದಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಹಿಂದೂಗಳ ವಿರುದ್ಧ ವಿಷಕಾರಿದೆ.
“ಹಿಂದೂಗಳು ಮಾತಿಗೆ ಅಲ್ಲ ಲಾಠಿಗೆ ಬಗ್ಗುತ್ತಾರೆ” ಎಂಬಂತಹ ಸಂದೇಶಗಳಿಗೆ ಪೋಸ್ಟರ್ಗಳನ್ನು ಅದು ಅಲ್ಲಲ್ಲಿ ಹಾಕಿದೆ. ಈ ಪೋಸ್ಟರ್ಗಳಲ್ಲಿ ಇಮ್ರಾನ್ ಖಾನ್ ಫೋಟೋಗಳಿವೆ. ಪಾಕಿಸ್ಥಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಮತ್ತು ಆ ಪಕ್ಷದ ಲಾಹೋರ್ ಕಾರ್ಯದರ್ಶಿಯ ಫೋಟೋಗಳು ಇವೆ.
ಪಾಕಿಸ್ಥಾನದಲ್ಲಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಅಲ್ಲಿನ ಹಿಂದೂಗಳು ಸೇರಿದಂತೆ ಇತರ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾಗುತ್ತಲೇ ಇರುತ್ತಾರೆ. ಇದೀಗ ಇಮ್ರಾನ್ ಸರ್ಕಾರ ಪೋಸ್ಟರ್ ಮೂಲಕವೇ ಹಿಂದೂಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಪಾಕಿಸ್ಥಾನದಲ್ಲಿ ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗುತ್ತಿಲ್ಲ ಮತ್ತು ಅವರ ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಅವರಿಗೆ ಸ್ವಾತಂತ್ರ್ಯವನ್ನು ನೀಡಲಾಗಿಲ್ಲ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಹಿಂದೂ ಮತ್ತು ಸಿಖ್ ಸಮುದಾಯಗಳ ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಅಪಹರಿಸಿ ಅವರಿಗೆ ವಯಸ್ಸಾದ ಮುಸ್ಲಿಂ ಪುರುಷರೊಂದಿಗೆ ವಿವಾಹ ಮಾಡಲಾಗುತ್ತಿದೆ, ಮತಾಂತರ ಮಾಡಲಾಗುತ್ತಿದೆ. ಸರ್ಕಾರ ಮತ್ತು ಪಾಕಿಸ್ಥಾನಿ ಸೈನಿಕರ ಬೆಂಬಲದೊಂದಿಗೆ ಪ್ರಬಲ ಇಸ್ಲಾಮಿಕ್ ಮೂಲಭೂತವಾದಿಗಳು ಮತ್ತು ಬೋಧಕರು ಈ ಅಪಹರಣಗಳನ್ನು ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.