ಬೆಂಗಳೂರು : ಕರ್ನಾಟಕದಲ್ಲಿ ಮೊದಲ ಸ್ವಯಂಚಾಲಿತ ರೈಲು ಬೋಗಿ ಸ್ವಚ್ಛತಾ ಘಟಕ ಸ್ಥಾಪನೆಯಾಗಿದೆ. ಬೋಗಿಗಳ ಹೊರಭಾಗವನ್ನು ಸ್ವಚ್ಛಗೊಳಿಸುವ ಸ್ವಯಂಚಾಲಿತ ಸೌಲಭ್ಯವನ್ನು ಸೌತ್ ವೆಸ್ಟರ್ನ್ ರೈಲ್ವೆಯ ಜನರಲ್ ಮ್ಯಾನೇಜರ್ ಎ.ಕೆ ಸಿಂಗ್ ಅವರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಉದ್ಘಾಟಿಸಿದ್ದಾರೆ.
ಸ್ವಯಂಚಾಲಿತ ಬೋಗಿ ಸ್ವಚ್ಛತಾ ಘಟಕ (ಎಸಿಡಬ್ಲ್ಯೂಪಿ)ವು ಈಗಿರುವ ಕೈಯಲ್ಲಿ ಸ್ವಚ್ಛಗೊಳಿಸುವ ವಿಧಾನಕ್ಕಿಂತ ಕಡಿಮೆ ನೀರು ಮತ್ತು ಕಡಿಮೆ ಮಾನವಶಕ್ತಿಯನ್ನು ಬಳಸಿಕೊಳ್ಳಲಿದೆ.
ಎಸಿಡಬ್ಲ್ಯೂಪಿ ಕರ್ನಾಟಕದ ರೈಲು ಬೋಗಿಗಳನ್ನು ಸ್ವಚ್ಛಗೊಳಿಸುವ ಮೊದಲನೇಯ ಘಟಕವಾಗಿದ್ದು, ಇದನ್ನು ಪ್ಲಾಟ್ಫಾರ್ಮ್ 1 ರ ಒಂದು ತುದಿಯಲ್ಲಿ ಸ್ಥಾಪಿಸಲಾಗಿದೆ.
ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಸಿಂಗ್, “ಘಟಕವು ಹೆಚ್ಚಿನ ಪ್ರಮಾಣದ ನೀರಿನ ಉಳಿತಾಯವನ್ನು ಮಾಡಲಿದೆ. ಸ್ವಚ್ಛಗೊಳಿಸುವಿಕೆಯ ಕಾರ್ಯಕ್ಕೆ ಮರುಬಳಕೆಯ ನೀರನ್ನು ಬಳಸಲಾಗುತ್ತದೆ. ಯಶವಂತಪುರದಲ್ಲಿ ಮತ್ತು ಬೈಯಪ್ಪನಹಳ್ಳಿಯ ಹೊಸ ಟರ್ಮಿನಸ್ನಲ್ಲಿ ಇದೇ ರೀತಿಯ ಘಟಕವನ್ನು ಸ್ಥಾಪನೆ ಮಾಡಲು ನಾವು ಯೋಜಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಕೈಯಲ್ಲಿ ಕೋಚ್ ಸ್ವಚ್ಛಗೊಳಿಸುವಿಕೆಗೆ 450 ರಿಂದ 500 ಲೀಟರ್ ನೀರು ಬಳಕೆಯಾಗುತ್ತದೆ. ಆದರೆ ಈ ಸ್ವಯಂಚಾಲಿತ ಘಟಕವು ಪ್ರತಿ ಕೋಚ್ ಸ್ವಚ್ಛತೆಗಾಗಿ 300 ಲೀಟರ್ ನೀರು ಬಳಸುತ್ತದೆ. ಸಾಂಪ್ರದಾಯಿಕ ಶುಚಿಗೊಳಿಸುವ ವಿಧಾನದಿಂದ ತೆಗೆದುಕೊಳ್ಳುವ ಸುಮಾರು 30 ನಿಮಿಷಗಳಿಗೆ ಹೋಲಿಸಿದರೆ ಈ ಘಟಕ ಕೇವಲ 8 ನಿಮಿಷಗಳಲ್ಲಿ ಕೋಚ್ ಸ್ವಚ್ಛಗೊಳಿಸುತ್ತದೆ. ಮಾನವಶಕ್ತಿಯ ಬಳಕೆಯನ್ನೂ ಇದು ಕಡಿಮೆ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.