ಇಸ್ಲಾಮಾಬಾದ್: ಭಾರತದ ವಿರುದ್ಧ ಜಿಹಾದ್ ಘೋಷಿಸುವಂತೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಜಾಮಿಯತ್ ಉಲೆಮಾ-ಇ ಇಸ್ಲಾಂ ಫಜ್ಲೂರ್ (ಜೆಯುಐಎಫ್) ಸದಸ್ಯರು ಪಾಕಿಸ್ಥಾನ ಅಸೆಂಬ್ಲಿಯಲ್ಲಿ ಬಹಿರಂಗವಾಗಿ ಮನವಿ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಅಲ್ಲಿನ ರಾಷ್ಟ್ರೀಯ ವಿಧಾನಸಭೆಯ ಸದಸ್ಯ ಮೌಲಾನಾ ಅಬ್ದುಲ್ ಅಕ್ಬರ್ ಚಿತ್ರಾಲಿ ಫೆಬ್ರವರಿ 10 ರಂದು ಭಾರತದ ವಿರುದ್ಧ ಜಿಹಾದ್ ಪ್ರಾರಂಭಿಸಲು ದಿನಾಂಕವನ್ನು ಸೂಚಿಸಿದ್ದಾನೆ.
ಈ ಚಿತ್ರಾಲಿ ಬೇರೆ ಯಾರೂ ಅಲ್ಲ, ದಿಯೋಬಂದ್ ತರಬೇತಿಯನ್ನು ಪಡೆದುಕೊಂಡಿರುವ ಮೌಲಾನಾ ಫಜಲ್ ಉರ್ ರೆಹಮಾನ್. ಈತ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾನೆ.
ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಒದಗಿಸುತ್ತಿರುವ ಪಾಕಿಸ್ಥಾನ ಈಗಾಗಲೇ ಅಂತರರಾಷ್ಟ್ರೀಯ ಸಮುದಾಯದಿಂದ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದೆ.
ಪಾಕಿಸ್ಥಾನ ಸರ್ಕಾರವು ತನ್ನ ನೆಲದ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮಕೈಗೊಳ್ಳಲು ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಯಿಂದಲೂ ಸಾಕಷ್ಟು ಒತ್ತಡಕ್ಕೆ ಒಳಗಾಗಿದೆ. ಇದರಿಂದಾಗಿ ಖಾನ್ ಸರ್ಕಾರ ಮುಜಫರಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಉಗ್ರ ಸಂಘಟನೆಗಳ ಕಚೇರಿಗಳನ್ನು ಮೊಹರು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.