ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಟ್ಯಾಬ್ಲೋ ಕಣ್ಮನ ಸೆಳೆಯಲು ಸಜ್ಜಾಗಿ ನಿಂತಿದೆ. ಬಸವಣ್ಣನವರು ಸ್ಥಾಪನೆ ಮಾಡಿದ ‘ಅನುಭವ ಮಂಟಪ’ದ ಮಾದರಿಯನ್ನು ರಾಜಪಥದಲ್ಲಿ ಪ್ರದರ್ಶಿಸಲಾಗುತ್ತಿದೆ.
ಸುಮಾರು 27 ಮಂದಿ ಕಲಾವಿದರು ಶರಣರಾಗಿ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಮಹಾನ್ ಸಮಾಜ ಸುಧಾರಕ ಬವಸಣ್ಣನವರು ಮಾಡಿದ ಸಾಮಾಜಿಕ ಆಧ್ಯಾತ್ಮಿಕ ಸುಧಾರಣೆಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲಿದ್ದಾರೆ.
ಟ್ಯಾಬ್ಲೋದಲ್ಲಿ ಬವಸಣ್ಣನವರ ಮಹಾನ್ ಘೋಷಣೆ ‘ಕಾಯಕವೇ ಕೈಲಾಸ’ ಇರಲಿದೆ ಮತ್ತು ಅವರ ದೊಡ್ಡ ಪ್ರತಿಮೆ ಕೂಡ ಇರಲಿದೆ. ಅಕ್ಕ ನಾಗಮ್ಮ, ಶರಣೆ ಸತ್ಯಕ್ಕ, ಅಂಬಿಗರ ಚೌಡಯ್ಯ, ಮೋಲಿಗೆ ಮಾರಯ್ಯ, ಕಲ್ಯಾಣಮ್ಮ ಹರಲಯ್ಯ ಮುಂತಾದವರ ಪ್ರತಿಮೆಯೂ ಇರಲಿದೆ.
ಅಲ್ಲಮ್ಮ ಪ್ರಭುವಿನೊಂದಿಗೆ ಮಾತುಕತೆ ನಡೆಸುತ್ತಿರುವ ಅಕ್ಕ ಮಹಾದೇವಿಯ ಸನ್ನಿವೇಶದ ಮಾದರಿಯೂ ಇರಲಿದೆ. ಲಿಂಗ ಸಮಾನತೆ ಸಾರುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸತತ 11ನೇ ಬಾರಿಗೆ ಕರ್ನಾಟಕದ ಟ್ಯಾಬ್ಲೋ ಗಣರಾಜ್ಯೋತ್ಸವ ಪರೇಡಿನಲ್ಲಿ ಭಾಗಿಯಾಗುತ್ತಿದೆ. 5 ಬಾರಿ ತನ್ನ ಟ್ಯಾಬ್ಲೋಗಳಿಗಾಗಿ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.