ಬೆಂಗಳೂರು: ಪ್ರಪಂಚದಾದ್ಯಂತ ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ಕರ್ನಾಟಕ ಸರ್ಕಾರವು ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ 2020) ನಡೆಸಲು ನಿರ್ಧರಿಸಿದೆ.
“ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 50 ನೇ ವಿಶ್ವ ಆರ್ಥಿಕ ವೇದಿಕೆಯ (WEF) ವಾರ್ಷಿಕ ಸಭೆಯಲ್ಲಿ ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ಜಿಐಎಂ 2020 ಬಗ್ಗೆ ಮೊದಲ ರೋಡ್ ಶೋ ನಡೆಸಿದರು ಮತ್ತು ಹೂಡಿಕೆ ಅವಕಾಶಗಳಿಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ 3 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಾಗತಿಕ ಸಂಸ್ಥೆಗಳನ್ನು ಆಹ್ವಾನಿಸಿದರು” ಎಂದು ಹೆಚ್ಚುವರಿ ಕಾರ್ಯದರ್ಶಿ ಪಿ ರವಿಕುಮಾರ್ ಹೇಳಿದ್ದಾರೆ.
ದಾವೋಸ್ನಲ್ಲಿ ಗುರುವಾರ ನಡೆದ “ಇನ್ವೆಸ್ಟ್ ಕರ್ನಾಟಕ 2020″ದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇನ್ನೋವೇಟ್ ನೌ, ಗ್ರೋತ್ ಫಾರೆವರ್” ಥೀಮ್ ಮೇಲೆ ಜಿಐಎಂ ನಡೆಸುವುದಾಗಿ ಹೇಳಿದರು. ರಾಜ್ಯವು ಉತ್ಪಾದನೆ, ಸೇವೆಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಅತ್ಯುತ್ತಮ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದಿದ್ದಾರೆ.
“ರಾಜ್ಯದ ಕೈಗಾರಿಕಾ ನೀತಿಗಳು, ಪ್ರೋತ್ಸಾಹಕಗಳು, ಮೂಲಸೌಕರ್ಯ, ತೆರಿಗೆ ವ್ಯವಸ್ಥೆ ಮತ್ತು ಹೂಡಿಕೆ ಸಾಮರ್ಥ್ಯಕ್ಕಾಗಿ ವ್ಯಾಪಾರ ಮಾಡುವ ಸುಲಭತೆಯನ್ನು ನಿರ್ಣಯಿಸಲು ಸುಮಾರು 100 ಉದ್ಯಮಿಗಳು, ವ್ಯಾಪಾರಿಗಳು ಮತ್ತು ಜಾಗತಿಕ ಸಂಸ್ಥೆಗಳ ಮುಖ್ಯಸ್ಥರು ರೋಡ್ ಶೋನಲ್ಲಿ ಭಾಗವಹಿಸಿದರು” ಎಂದು ರವಿಕುಮಾರ್ ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಸ್ವಿಸ್-ಇಂಡಿಯಾ ಸಂಸದೀಯ ಗುಂಪಿನ ಅಧ್ಯಕ್ಷ ನಿಕ್ಲಾಸ್-ಸ್ಯಾಮ್ಯುಯೆಲ್ ಗುಗ್ಗರ್, ಉಬೆರ್ ಮುಖ್ಯ ಕಾರ್ಯನಿರ್ವಾಹಕ ದಾರಾ ಖೋಸ್ರೋಶಾಹಿ, ಜನರಲ್ ಎಲೆಕ್ಟ್ರಿಕ್ (ಜಿಇ) ಕಾರ್ಯನಿರ್ವಾಹಕ ವಿಲಿಯಂ ಕೋವನ್ ಮತ್ತು ಜೆಮಿನಿ ಕಾರ್ಪೊರೇಷನ್, ಕೋಕಾ ಕೋಲಾ, ಎಸ್ಎಪಿ ಲ್ಯಾಬ್ಸ್, ಸ್ವಿಸ್ ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಮುಖ್ಯಸ್ಥರು ಕೂಡ ಭಾಗಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.