ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಕರ್ನಾಟಕದಲ್ಲಿ ಬಿಜೆಪಿ ಪ್ರಾರಂಭಿಸಿದ ಆಕ್ರಮಣಕಾರಿ ಮನೆ ಮನೆ ಅಭಿಯಾನವು ಯಶಸ್ವಿಯಾಗುತ್ತಿದ್ದು, ಭಾರೀ ಜನಸ್ಪಂದನೆ ಸಿಗುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಆತಂಕವನ್ನು ಸೃಷ್ಟಿಸಿದೆ.
ಬಿಜೆಪಿ ನಡೆಸುತ್ತಿರುವ ಮನೆ ಮನೆ ಪ್ರಚಾರವು ಆತಂಕಕಾರಿಯಾಗಿದೆ ಎಂಬ ಕಳವಳವನ್ನು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪಕ್ಷದ ನಾಯಕತ್ವಕ್ಕೆ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಪೌರತ್ವ ಕಾನೂನಿನ ಬಗ್ಗೆ ತನ್ನ ಕಾರ್ಯಕರ್ತನನ್ನು ಸಂವೇದನಾಶೀಲಗೊಳಿಸುವ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಾಗಾರದಲ್ಲಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಎ ವಿರುದ್ಧದ ಅಭಿಯಾನದಲ್ಲಿ ಪಕ್ಷವು ಮುನ್ನಡೆಯನ್ನು ಪಡೆಯಬೇಕು ಎಂಬುದನ್ನು ಸೂಚಿಸಿದ್ದರು. ಆದರೆ ಕಾರ್ಯಕರ್ತರು ಬಿಜೆಪಿಯ ಅಭಿಯಾನ ನಮಗೆ ಸವಾಲೆಸೆದಿದೆ, ಬೆಂಬಲವನ್ನು ಗಳಿಸುವಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ ಎಂಬುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
“ಬಿಜೆಪಿ ಮನೆ ಮನೆಗೆ ಹೋಗುತ್ತಿದೆ ಮತ್ತು ಅವರು ಸಿಎಎ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸಮರ್ಥರಾಗಿದ್ದಾರೆ. ಜನರು ನಮ್ಮ ನಿರೂಪಣೆಯನ್ನು ಪ್ರಶ್ನಿಸುತ್ತಿದ್ದಾರೆ. ನಾವು ಕಾರ್ಯೋನ್ಮುಖವಾಗಿದ್ದರೆ ವಿಷಯಗಳು ಕೈಮೀರುತ್ತವೆ ”ಎಂದು ನಿವೃತ್ತ ಐಎಎಸ್ ಅಧಿಕಾರಿ, ಕಾಂಗ್ರೆಸ್ಸಿಗ ಸೈಯದ್ ಜಮೀರ್ ಪಾಷಾ ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದಾರೆ.
ಜಯನಗರದ ಕಾಂಗ್ರೆಸ್ ಶಾಸಕ ಸೌಮ್ಯ ರೆಡ್ಡಿ ಕೂಡ ಕಳವಳ ವ್ಯಕ್ತಪಡಿಸಿ, ಸಿಎಎಗೆ ಬೆಂಬಲ ಸಂಗ್ರಹಿಸಲು ಕಳೆದ ಒಂದು ತಿಂಗಳಿನಿಂದ ಬಿಜೆಪಿ ಕೌನ್ಸಿಲರ್ಗಳು ಮತ್ತು ಶಾಸಕರು ಮನೆ ಮನೆಗೆ ತೆರಳುತ್ತಿದ್ದಾರೆ. ಕೈಪಿಡಿಗಳನ್ನು ಹಂಚಿ ಸಿಎಎ ಬಗ್ಗೆ ಮತ್ತು ಎನ್ ಆರ್ ಸಿ ಬಗ್ಗೆ ವಿವರಿಸುತ್ತಿದ್ದಾರೆ ಎಂದಿದ್ದಾರೆ.
ಜನರನ್ನು ಸಿಎಎ ವಿರುದ್ಧ ಎತ್ತಿಕಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಬಿಜೆಪಿಯ ಅಭಿಯಾನದ ತಲೆಬಿಸಿ ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.