ಬೆಂಗಳೂರು: ಅಮಾನವೀಯ ಎನಿಸುವಂತಹ ಕೆಲವೊಂದು ಆಚರಣೆಗಳನ್ನು ತೆಗೆದು ಹಾಕುವ ಸಲುವಾಗಿ ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಎಂಜಲು ಎಲೆ ಮೇಲೆ ಉರುಳುವ ಮಡೆಸ್ನಾನ, ಬೆತ್ತಲೆ ಸೇವೆ , ಮಾಟ-ಮಂತ್ರ, ವಶೀಕರಣ ಮುಂತಾದವುಗಳಿಗೆ ನಿಷೇಧವನ್ನು ಹೇರಲಾಗಿದೆ.
ಜನವರಿ 4ರಿಂದಲೇ ಈ ಕಾಯ್ದೆ ಜಾರಿಗೆ ಬಂದಿದೆ. ಕಾಯ್ದೆ ಜಾರಿಯಿಂದಾಗಿ ಬೆತ್ತಲೆ ಸೇವೆಗೆ ಸಂಪೂರ್ಣ ನಿಷೇಧ ಬಿದ್ದಿದೆ. ಮಡೆಸ್ನಾನವೂ ನಿಷೇಧವಾಗಿದೆ. ಋುತಿಮತಿಯಾದಾಗ, ಗರ್ಭಿಣಿಯಾದಾಗ ಊರ ಹೊರಗಿಡುವ ಪದ್ಧತಿ, ವಶೀಕರಣ, ವಾಮಾಚಾರದಂತಹ ಪದ್ಧತಿಯನ್ನು ಕಾಯ್ದೆಯಲ್ಲಿ ನಿಷೇಧ ಮಾಡಲಾಗಿದೆ.
ದೆವ್ವ ಉಚ್ಛಾಟನೆಯ ಹೆಸರಿನಲ್ಲಿ ಹಿಂಸೆ ನೀಡುವುದು, ಭಾನಾಮತಿ ಮಾಡುವುದು, ಸೈತಾನ ಎಂದು ಬಿಂಬಿಸುವುದು, ಮಕ್ಕಳನ್ನು ಎತ್ತರದಿಂದ ಬಿಸಾಕುವುದು, ಮುಖ, ಬಾಯಿ ಕೊಕ್ಕೆ ಚುಚ್ಚಿಕೊಳ್ಳುವುದು ಇತ್ಯಾದಿಗಳು ಈ ಕಾಯ್ದೆಯಡಿ ಅಪರಾಧವಾಗಿದೆ. ಪ್ರಾಣಿಗಳನ್ನು ಕಚ್ಚಿ ಸಾಯಿಸಿ ಬಲಿಕೊಡುವುದು ಇತ್ಯಾದಿಗಳು ಅಪರಾಧವಾಗಿದೆ.
ಜ್ಯೋತಿಷ್ಯ, ವಾಸ್ತುಶಾಸ್ತ್ರಕ್ಕೆ, ಪೂಜಾ ವಿಧಿವಿಧಾನಗಳಿಗೆ, ಸಾತ್ವಿಕ ಆಚರಣೆಗಳಿಕೆ ಕಾಯ್ದೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಮೌಢ್ಯಾಚರಣೆ ಕಂಡು ಬಂದರೆ ಜನರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರಿಗೆ ದೂರನ್ನು ನೀಡಬಹುದಾಗಿದೆ. ಅವರು ಎಫ್ ಐಆರ್ ದಾಖಲಿಸಿಕೊಳ್ಳಬೇಕು, ಸ್ವಯಂ ಪ್ರೇರಿತವಾಗಿಯೂ ದೂರು ದಾಖಲಿಸಿಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.