ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಕುರಿತು ಮಹತ್ವದ ಸಭೆ ನಡೆಸಲಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರೈ ವಹಿಸಲಿದ್ದಾರೆ. ದೆಹಲಿಯ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಯಲಿದೆ.
2021ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ, ಮೊದಲ ಹಂತ 2020 ರ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ, ಮನೆಯ ಮುಖ್ಯಸ್ಥರು ಯಾರು, ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ, ಮನೆಯಲ್ಲಿ ಯಾವ ಯಾವ ಸೌಲಭ್ಯವಿದೆ ಮುಂತಾದ ಮನೆಯ ಬಗೆಗಿನ ನಿರ್ದಿಷ್ಟ ಮಾಹಿತಿಯ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಎರಡನೇ ಹಂತ, 2021 ರ ಫೆಬ್ರವರಿಯಿಂದ ಪ್ರಾರಂಭವಾಗಲಿದ್ದು, ಇದಕ್ಕೆ ಪ್ರಶ್ನೆಗಳು ಪ್ರತ್ಯೇಕವಾಗಿರುತ್ತವೆ.
ಎಲ್ಲಾ ರಾಜ್ಯಗಳು ಎನ್ಪಿಆರ್ ಬಗ್ಗೆ ಮರು ಅಧಿಸೂಚನೆ ಹೊರಡಿಸಿವೆ, ಆದರೆ ಕೇರಳ ಮತ್ತು ಪಶ್ಚಿಮ ಬಂಗಾಳ ಕೇಂದ್ರಕ್ಕೆ ಇದನ್ನು ತಡೆಹಿಡಿಯುವಂತೆ ಕೋರಿದೆ ಎನ್ನಲಾಗಿದೆ. 2021 ರಲ್ಲಿ ಹೊಸದಾಗಿ ಸೇರ್ಪಡೆಯಾದ ಅಂಶವೆಂದರೆ ಮನೆಯವರ ಲಿಂಗಕ್ಕೆ ಸಂಬಂಧಿಸಿದ್ದು, ಹಿಂದೆ ಗಂಡು ಅಥವಾ ಹೆಣ್ಣು ಎಂಬ ಎರಡು ಆಯ್ಕೆಯನ್ನು ಮಾತ್ರ ನೀಡಲಾಗಿತ್ತು, ಆದರೆ ಈ ಬಾರಿ ತೃತೀಯ ಲಿಂಗಿ ಆಯ್ಕೆಯನ್ನೂ ನೀಡಲಾಗಿದೆ.
ಅಲ್ಲದೆ, 2011ರಲ್ಲೂ ಆವರಣದೊಳಗಿನ ಶೌಚಾಲಯದ ಬಗ್ಗೆ ಒಂದು ಪ್ರಶ್ನೆ ಇತ್ತು, ಆದರೆ ಈ ಬಾರಿ ಗಣತಿ ಮಾಡುವವರು ಶೌಚಾಲಯದ ಲಭ್ಯತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಕುಟುಂಬ ಅಥವಾ ಸಾರ್ವಜನಿಕರಿಗೆ ಶೌಚಾಲಯ ಪ್ರತ್ಯೇಕವಾಗಿದೆಯೇ ಎಂಬ ಪ್ರಶ್ನೆಗಳನ್ನು ಇವೆ ಎಂದು ಮೂಲಗಳು ತಿಳಿಸಿವೆ. 2011 ರಂತಲ್ಲದೆ, ಈ ಬಾರಿ ಎರಡನೇ ಹಂತದಲ್ಲಿ ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ಪ್ರಶ್ನೆಯನ್ನು ಕೇಳಲಾಗುತ್ತದೆ.
“ಎನ್ಪಿಆರ್ ಕಾರ್ಯಕ್ರಮಕ್ಕಾಗಿ ಜನರಿಂದ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ. ಜನರು ಪರಿಶೀಲನೆಗಾಗಿ ದಾಖಲೆಗಳನ್ನು ಪ್ರಸ್ತುತಪಡಿಸಲು ಬಯಸಿದರೆ, ಅದನ್ನು ಮಾಡಲು ಮುಕ್ತರಾಗಿದ್ದಾರೆ. ಎಣಿಕೆದಾರರ ಕಡೆಯಿಂದ ಯಾವುದೇ ಬಲವಂತವಿರುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.