ಲಕ್ನೋ: ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ವಿಕಸನಗೊಳಿಸುವ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಟೆಕ್ನಾಲಜಿ (ಐಎಂಟಿ) ಘಜಿಯಾಬಾದ್ ಯೋಜನೆಯ ಭಾಗವಾಗಿ ಉತ್ತರ ಪ್ರದೇಶದ ಬಹದ್ದೂರ್ಪುರ ಮತ್ತು ಖೇರಿ ವಿರಾನ್ ಭಾರತದ ಮೊದಲ ‘ಮಾದರಿ ಕ್ರೀಡಾ ಗ್ರಾಮ’ಗಳಾಗಿ ಹೊರಹೊಮ್ಮಲಿದೆ.
‘ಆದರ್ಶ್ ಖೇಲ್ ಗ್ರಾಮ್’ ಕಾರ್ಯಕ್ರಮದಡಿ, ಐಎಂಟಿ ಎಂಬ ಎನ್ಜಿಓ ‘ಸ್ಪೋರ್ಟ್ಸ್: ಎ ವೇ ಆಫ್ ಲೈಫ್’ ಸಹಯೋಗದೊಂದಿಗೆ ಕ್ರೀಡಾ ಸಂಸ್ಕೃತಿಯನ್ನು ವಿಕಸನಗೊಳಿಸುತ್ತದೆ ಮತ್ತು ಈ ಎರಡು ಹಳ್ಳಿಗಳಲ್ಲಿ ಕ್ರೀಡಾ ಸಾಕ್ಷರತೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ. ಉಚಿತ ಕಿರುಪುಸ್ತಕಗಳು, ಕ್ರೀಡಾ ನಿಯತಕಾಲಿಕೆಗಳು ಮತ್ತು ಗ್ರಾಮಸ್ಥರಿಗೆ ಮೂಲ ಜ್ಞಾನವನ್ನು ನೀಡುವ ಪುಸ್ತಕಗಳನ್ನು ವಿತರಿಸುವ ಮೂಲಕ ಗ್ರಾಮದ ಕ್ರೀಡಾ ಜ್ಞಾನವನ್ನು ವೃದ್ಧಿಸಲಾಗುತ್ತದೆ. ಇಲ್ಲಿನ ಎಲ್ಲಾ ವರಾಂಡಾಗಳು, ಪ್ರಾಂಗಣಗಳನ್ನು ಪ್ರಾಥಮಿಕ ಕ್ರೀಡಾ ಮೈದಾನ ನಿರ್ವಹಣೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಗ್ರಾಮದಲ್ಲಿ ಪ್ರತಿದಿನ ಸಂಜೆ 4 ರಿಂದ 5 ಗಂಟೆಯವರೆಗೆ ಒಂದು ಗಂಟೆ ಕ್ರೀಡೆಗಳನ್ನು ಆಡಲು ಸಮಯವನ್ನು ಗೊತ್ತುಪಡಿಸಲಾಗುತ್ತದೆ. ಐಎಂಟಿಯು ಪ್ರತಿ ಮನೆಯ ಪ್ರತಿ ಮಗುವಿಗೆ ಒಲಿಂಪಿಕ್ ಸಂಬಂಧಿತ ಎಲ್ಲಾ ಕ್ರೀಡಾ ಉಪಕರಣಗಳನ್ನು ಸಹ ಒದಗಿಸುತ್ತದೆ ಮತ್ತು ಪ್ರತಿಭೆ ಬೇಟೆಯನ್ನು ಹಲವಾರು ಅಂತರ ಮತ್ತು ಅಂತರ್ ಗ್ರಾಮ ಪಂದ್ಯಾವಳಿಗಳ ಸಹಾಯದಿಂದ ನಡೆಸಲಾಗುತ್ತದೆ.
ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಹಾಜರಿದ್ದ ಜಾವೆಲಿನ್ ಆಟಗಾರ ದೇವೇಂದ್ರ ಹಜಾರಿಯಾ ಅವರು, “ನಾನು ಗ್ರಾಮೀಣ ವಲಯದಲ್ಲಿ ಕೆಲಸ ಮಾಡುವ ಪರಿಕಲ್ಪನೆಯನ್ನು ಇಷ್ಟಪಡುತ್ತೇನೆ. ಏಕೆಂದರೆ ನಾವು ನೋಡಿದ ಹಾಗೆ, ಭಾರತದ ಶೇ.80ರಷ್ಟು ಒಲಿಂಪಿಕ್ ಪದಕ ವಿಜೇತರು ಹಳ್ಳಿಗಳಿಂದ ಬಂದಿದ್ದಾರೆ. ಹಳ್ಳಿಗಳಲ್ಲಿ ಪ್ರತಿಭೆ ಸಾಕಷ್ಟು ಇದೆ ಆದರೆ ಸೌಲಭ್ಯಗಳು ಕಡಿಮ ಇದೆ. ಈ ಯೋಜನೆ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಭಾರತವು ಕ್ರೀಡಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಸಂದೇಶವನ್ನು ರವಾನಿಸುತ್ತದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.