ಕೊಚ್ಚಿ: ಕೇರಳದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳು ಆಗಾಗ ದೇಶದ ಗಮನವನ್ನು ಸೆಳೆಯುತ್ತಿರುತ್ತದೆ. ಹಿಂದೂ ಸಂಘಟನೆಗಳು ಹಿಂದಿನಿಂದಲೂ ಲವ್ ಜಿಹಾದ್ ನಡೆಯುತ್ತಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಕೂಗು ಆರೋಪಿಸುತ್ತಾ ಬಂದಿವೆ. ಆದರೆ ಕೇರಳ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಆದರೀಗ ಕ್ರೈಸ್ಥ ಸಂಘಟನೆಗಳು ಲವ್ ಜಿಹಾದ್ ಬಗ್ಗೆ ಆರೋಪ ಮಾಡಿವೆ.
‘ಲವ್ ಜೆಹಾದ್ ವಾಸ್ತವ ಮತ್ತು ಸತ್ಯ’ ಎಂದು ಕೆಥೋಲಿಕ್ ಬಿಷಪ್ಗಳ ಒಕ್ಕೂಟ ಸೈರೋ- ಮಲಬಾರ್ ಚರ್ಚ್ ಪ್ರತಿಪಾದಿಸಿದೆ. “ಕೆಥೋಲಿಕ್ ಸಮುದಾಯದ ಯುವತಿಯರನ್ನು ಇಸಿಸ್ನಂತಹ ಭಯೋತ್ಪಾದನಾ ಸಂಘಟನೆಗೆ ಸೇರುವಂತೆ ತಲೆಕೆಡಿಸುವ ಜಾಲ ಹೆಚ್ಚಾಗುತ್ತಿದೆ. ಅವರು ಮೂಲಕ ಉಗ್ರ ಕೃತ್ಯಗಳಿಗೆ ನೆರವು ನೀಡುವಂತೆ ಮನವೊಲಿಸಲಾಗುತ್ತಿದೆ. ಆದರೆ ಈ ಪ್ರಕರಣಗಳನ್ನು ಕೇರಳ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಆರೋಪಿಸಿದೆ.
ಅಲ್ಲದೇ, ಲವ್ ಜಿಹಾದಿಗಾಗಿ ಕ್ರೈಸ್ಥ ಯುವತಿಯರನ್ನು ಹತ್ಯೆ ಮಾಡಲಾಗಿದೆ. ಲವ್ ಜಿಹಾದ್ ಪ್ರಕರಣಗಳು ಕೇರಳದ ವಿವಿಧ ಸಮುದಾಯಗಳ ನಡುವೆ ವೈಷಮ್ಯ ಮೂಡಿಸುತ್ತಿದೆ ಎಂದು ಆರೋಪಿಸಿದೆ.
ಕಳೆದೆರಡು ವರ್ಷದಲ್ಲಿ ಕೇರಳದಿಂದ ಇಸಿಸ್ ಸಂಘಟನೆಗೆ ಸೇರಿದ ಅರ್ಧದಷ್ಟು ಮಂದಿ ಕ್ರೈಸ್ಥ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರು ಎಂದಿದೆ.
ಕ್ರೈಸ್ಥ ಸಂಘಟನೆಯ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ. ಲವ್ ಜಿಹಾದ್ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ ಎಂದಿದೆ. ಆದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಆರೋಪವನ್ನು ತಿರಸ್ಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.