ಮುಂಬಯಿ: ಮುಂಬಯಿಯ ಇಂದು ಮಿಲ್ಸ್ ಕಾಂಪೌಂಡ್ನಲ್ಲಿರುವ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಎತ್ತರವನ್ನು 100 ಅಡಿಗೆ ಹೆಚ್ಚಿಸುವ ಪ್ರಸ್ತಾಪಕ್ಕೆ ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿತು. ಮಾತ್ರವಲ್ಲದೇ, ಈ ಯೋಜನೆಗಾಗಿ 1089.95 ಕೋಟಿ ರೂ.ಗಳ ಪರಿಷ್ಕೃತ ವೆಚ್ಚಕ್ಕೆ ಅನುಮೋದನೆಯನ್ನು ನೀಡಲಾಯಿತು.
ಸಂಪುಟ ತೆಗೆದುಕೊಂಡ ಇತರ ಪ್ರಮುಖ ನಿರ್ಧಾರಗಳೆಂದರೆ, ದಿವಂಗತ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ವಿಲಾಸ್ ರಾವ್ ದೇಶಮುಖ್ ಅವರ ಹೆಸರನ್ನು ಮುಂಬಯಿಯಲ್ಲಿನ ಈಸ್ಟರ್ನ್ ಫ್ರೀವೇಗೆ ಮರು ನಾಮಕರಣ ಮಾಡುವುದು. ಶಿವಸೇನೆ ಮುಖ್ಯಸ್ಥ ಭಾಳ ಠಾಕ್ರೆ ಅವರ ಹೆಸರನ್ನು ಕೃಷಿ ವ್ಯವಹಾರ ಮತ್ತು ಗ್ರಾಮೀಣ ಪರಿವರ್ತನೆ ಯೋಜನೆಗೆ ಇಡುವುದು.
ಅಂಬೇಡ್ಕರ್ ಸ್ಮಾರಕದ ಪೀಠದ ಎತ್ತರವು 100 ಅಡಿಗಳಷ್ಟೇ ಇರಲಿದೆ, ಪ್ರತಿಮೆಯ ಎತ್ತರವನ್ನು ಮೊದಲಿಗೆ ನಿರ್ಧರಿಸಿದ 250 ಅಡಿಗಳಿಂದ 350 ಅಡಿಗಳಿಗೆ ಏರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದರು.
“ಕಂಚಿನ ಪ್ರತಿಮೆ ಮತ್ತು ಪೀಠದ ಎತ್ತರವನ್ನು 350 ಅಡಿಗಳಿಂದ 450 ಅಡಿಗಳಿಗೆ ಹೆಚ್ಚಿಸುವ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗಾಗಿ ಇರುವ ಬಜೆಟ್ ಅನ್ನು ಪ್ರಸ್ತುತ 700 ಕೋಟಿ ರೂ.ಗಳಿಂದ 1089.95 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ” ಎಂದು ಹಣಕಾಸು ಖಾತೆಯನ್ನು ಹೊಂದಿರುವ ಪವಾರ್ ಹೇಳಿದರು.
“ಪ್ರಸ್ತಾವಿತ ಸ್ಮಾರಕವು ಪ್ರತಿಮೆಯ ಹೊರತಾಗಿ ಗ್ರಂಥಾಲಯ, ಸಂಶೋಧನಾ ಕೇಂದ್ರ ಮತ್ತು ಒಟ್ಟು 1000 ಸಾಮರ್ಥ್ಯದ ಸಭಾಂಗಣವನ್ನು ಒಳಗೊಂಡಿದೆ” ಎಂದು ಅವರು ಹೇಳಿದ್ದಾರೆ
“ಮುಂದಿನ ಎಂಟು ದಿನಗಳಲ್ಲಿ ಯೋಜನೆಗೆ ಅಗತ್ಯವಾದ ಅನುಮತಿಗಳನ್ನು ಪಡೆದುಕೊಳ್ಳಲಾಗುವುದು. ಸಾಮಾಜಿಕ ನ್ಯಾಯ ಇಲಾಖೆಯು ಯೋಜನೆಯ ಮೇಲ್ವಿಚಾರಣೆಯ ಭಾಗವಾಗಲಿದೆ “ಎಂದು ಪವಾರ್ ಹೇಳಿದ್ದಾರೆ.
ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್ಡಿಎ) ಈ ಯೋಜನೆಗೆ ನೋಡಲ್ ಏಜೆನ್ಸಿಯಾಗಲಿದೆ ಮತ್ತು ಸ್ಮಾರಕದ ನಿರ್ಮಾಣವನ್ನು ಪ್ರಾರಂಭಿಸಲು ಕೇಂದ್ರದ ಯಾವುದೇ ಅನುಮತಿಯ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2015 ರ ಅಕ್ಟೋಬರ್ನಲ್ಲಿ ಸ್ಮಾರಕಕ್ಕೆ ಶಿಲಾನ್ಯಾಸ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.