ನವದೆಹಲಿ: ಇಂದು 72 ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ, ರಾಷ್ಟ್ರಪತಿ, ರಕ್ಷಣಾ ಸಚಿವರು ಸೇರಿದಂತೆ ಗಣ್ಯರು ಅವರು ಭಾರತೀಯ ಸೇನೆಗೆ ಶುಭಾಶಯಗಳನ್ನು ಕೋರಿದ್ದಾರೆ.
ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸೈನಿಕರೊಂದಿಗೆ ಇರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
“ಸೇನಾ ದಿನದ ಅಂಗವಾಗಿ ನಾನು ಇಂದು ಭಾರತೀಯ ಸೇನಾ ಸಿಬ್ಬಂದಿಗಳಿಗೆ ಮಾಡುತ್ತೇನೆ. ಅವರ ಸ್ಪೂರ್ತಿ, ಶೌರ್ಯ ಮತ್ತು ತ್ಯಾಗಗಳು ಭಾರತವನ್ನು ಸುರಕ್ಷಿತ ತಾಣವನ್ನಾಗಿ ಮಾಡಿದೆ” ಎಂದಿದ್ದಾರೆ.
On Army Day today, I salute all valiant Indian Army personnel and recall with pride their indomitable spirit, valour and sacrifices in making India a safer place. #ArmyDay2020 pic.twitter.com/cbdbdnc1VH
— Rajnath Singh (@rajnathsingh) January 15, 2020
ಪ್ರಧಾನಿ ನರೇಂದ್ರ ಮೋದಿಯವರು, ‘ಭಾರತದ ಸೈನ್ಯವು ತಾಯಿ ಭಾರತಿಯ ರಕ್ಷಣೆ ಮತ್ತು ಹೆಮ್ಮೆ. ಸೇನಾ ದಿನಾಚರಣೆಯ ಸಂದರ್ಭದಲ್ಲಿ, ದೇಶದ ಎಲ್ಲ ಸೈನಿಕರ ಅದಮ್ಯ ಧೈರ್ಯ, ಶೌರ್ಯ ಮತ್ತು ಸಾಹಸಕ್ಕೆ ನಮಸ್ಕರಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
भारत की सेना मां भारती की आन-बान और शान है। सेना दिवस के अवसर पर मैं देश के सभी सैनिकों के अदम्य साहस, शौर्य और पराक्रम को सलाम करता हूं।
— Narendra Modi (@narendramodi) January 15, 2020
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ‘ಭಾರತೀಯ ಸೇನಾ ದಿನದ ಅಂಗವಾಗಿ ದೇಶದ ಎಲ್ಲಾ ಯೋಧರು ಅದಮ್ಯ ಸಾಹಸ, ಶೌರ್ಯ ಮತ್ತು ಪರಾಕ್ರಮಕ್ಕೆ ನಮಸ್ಕರಿಸುತ್ತೇನೆ. ಯುದ್ಧ ವೀರರು ಮತ್ತು ಅವರ ಪರಿವಾರದವರಿಗೂ ಶುಭಾಶಯಗಳು. ನೀವು ನಮ್ಮ ರಾಷ್ಟ್ರದ ಗೌರವ, ನಮ್ಮ ಸ್ವಾತಂತ್ರ್ಯದ ಸಂರಕ್ಷಕರು. ನಿಮ್ಮ ಸರ್ವೋಚ್ಛ ತ್ಯಾಗದ ಭಾವ ಸಾರ್ವಭೌಮತ್ವವನ್ನು ರಕ್ಷಿಸಿದೆ, ದೇಶದ ಗೌರವವನ್ನು ವೃದ್ಧಿಸಿದೆ ಜನರ ರಕ್ಷಣೆ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
सेना दिवस के अवसर पर भारतीय सेना के सभी फौजी भाई-बहनों, युद्धवीरों और उनके परिवारों को बधाई।
आप हमारे राष्ट्र के गौरव हैं और हमारी आजादी के रखवाले। आपकी सर्वोच्च त्याग भावना ने हमारी संप्रभुता की रक्षा की है, देश का गौरव बढ़ाया है और लोगों की सुरक्षा की है।
जय हिन्द! 🇮🇳
— President of India (@rashtrapatibhvn) January 15, 2020
ಇಂದು ಬೆಳಗ್ಗೆ ಸಿಡಿಎಸ್ ಬಿಪಿನ್ ರಾವತ್ ಅವರು ರಾಷ್ಟ್ರೀಯತೆ ಸ್ಮಾರಕದಲ್ಲಿ ವೀರಯೋಧರಿಗೆ ನಮನವನ್ನು ಸಲ್ಲಿಸಿದರು. ಅವರಿಗೆ ಮೂರು ಸೇನಾಪಡೆಗಳ ಮುಖ್ಯಸ್ಥರುಗಳು ಸಾಥ್ ನೀಡಿದರು.
ಪ್ರತಿವರ್ಷ ಜನವರಿ 15ರಂದು ಭಾರತೀಯ ಸೇನಾ ದಿವಸವನ್ನು ಆಚರಿಸಲಾಗುತ್ತದೆ. ವೀರ ಸೈನಿಕರು ನಮ್ಮ ದೇಶದ ಸುರಕ್ಷತೆ ಮತ್ತು ರಕ್ಷಣೆಗಾಗಿ ನೀಡುತ್ತಿರುವ ಕೊಡುಗೆಗಳನ್ನು ಗೌರವಿಸುವುದು ಮತ್ತು ಸ್ಮರಿಸುವುದು ಈ ದಿನದ ಪ್ರಾಮುಖ್ಯತೆ ಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.