ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಗಂಗಾಸಾಗರ ಮೇಳದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವ ಸಲುವಾಗಿ ಸ್ವ-ಸಹಾಯ ಗುಂಪುಗಳು ತಯಾರಿಸಿದ ಹತ್ತಿ ಚೀಲಗಳನ್ನು ಭಕ್ತರಿಗೆ ವಿತರಿಸಲಾಗುತ್ತಿದೆ. ಈ ಉಪಕ್ರಮವು ಕಡಲ ಮಾಲಿನ್ಯವನ್ನು ತಡೆಗಟ್ಟುವ ಮತ್ತು ದೇಶದಿಂದ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಪ್ರಧಾನಮಂತ್ರಿಯವರ ಅಭಿಯಾನವನ್ನು ಬೆಂಬಲಿಸುವ ಒಂದು ಹೆಜ್ಜೆಯಾಗಿದೆ.
ಭಾರತದ ನದಿ ಮತ್ತು ಸಮುದ್ರದಲ್ಲಿ ಪ್ರತಿವರ್ಷ ಸುಮಾರು 1.15-2.41 ಮಿಲಿಯನ್ ಟನ್ ಪ್ಲಾಸ್ಟಿಕ್ ಬಂದು ಬೀಳುತ್ತವೆ, ಇವುಗಳನ್ನು ಸ್ವಚ್ಛಗೊಳಿಸಲು 48,000 ರಿಂದ 100,000 ಟ್ರಕ್ಗಳು ಬೇಕಾಗುತ್ತವೆ, ಇದು ಅತ್ಯಂತ ತೀವ್ರ ಪರಿಸ್ಥಿತಿ ಎಂದು ಸಾಗರ ವಿಜ್ಞಾನಿಗಳು ಹೇಳುತ್ತಾರೆ.
ಯಾತ್ರಾರ್ಥಿಗಳು ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದನ್ನು ತಪ್ಪಿಸಲು ಸ್ವಯಂಸೇವಾ ಸಂಸ್ಥೆಗಳು ಬಟ್ಟೆಯ ಚೀಲಗಳನ್ನು ನೀಡುತ್ತಿರುವ ದೃಶ್ಯ ಗಂಗಾಸಾಗರ ಮೇಳದಲ್ಲಿ ಕಂಡು ಬಂತು. ಇಲ್ಲಿಯವರೆಗೆ ಸ್ವಯಂಸೇವಕರು ಸುಮಾರು 4000 ಬಟ್ಟೆಗಳನ್ನು ಬಳಸಿ ತಯಾರಿಸಿದ 25000 ಬಟ್ಟೆ ಚೀಲಗಳನ್ನು ಗಂಗಾಸಾಗರ ಮೇಳದಲ್ಲಿ ವಿತರಿಸಿದ್ದಾರೆ.
ಬಟ್ಟೆ ಚೀಲ ತಯಾರಿಸುವ ಕೆಲಸದಲ್ಲಿ ತೊಡಗಿರುವ ಸಂಸ್ಥೆ ಸ್ವತಃ ಈ ಪರಿಸರ ಸ್ನೇಹಿ ಚೀಲಗಳನ್ನು ತಯಾರಿಸಿ ವಿತರಿಸುತ್ತಿದೆ.
ಗಂಗಾಸಾಗರ ಮೇಳದಲ್ಲಿ ಭಕ್ತರು ಸರ್ಕಾರದ ಉಪಕ್ರಮವನ್ನು ಶ್ಲಾಘಿಸಿದ್ದಾರೆ ಮತ್ತು ಪರಿಸರ ಮತ್ತು ಸಾಗರವನ್ನು ಕಲುಷಿತವಾಗದಂತೆ ರಕ್ಷಿಸಲು ಅದು ಉತ್ತಮ ಹೆಜ್ಜೆಯನ್ನು ಮುಂದಿಟ್ಟಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.