ತುಮಕೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾದರು. ಸಿದ್ದಗಂಗಾ ಶ್ರೀಗಳ ಮ್ಯೂಸಿಯಂಗೆ ಶಿಲಾನ್ಯಾಸವನ್ನು ನೆರವೇರಿಸಿದರು. ನಂತರ ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಮೋದಿಯವರು, 2020ರ ವರ್ಷ ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸಿದರು. “ತುಂಬಾ ವರ್ಷಗಳ ಬಳಿಕ ನಾನು ತುಮಕೂರಿಗೆ ಆಗಮಿಸಿದ್ದೇನೆ. ಪೂಜ್ಯ ಶಿವಕುಮಾರ ಸ್ವಾಮೀಜಿ ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬ ಶೂನ್ಯ ಇಲ್ಲಿಗೆ ಬಂದಾಗ ನನ್ನನ್ನು ಆವರಿಸಿತು. ಇಂದು ಅವರ ಮ್ಯೂಸಿಯಂಗೆ ಶಿಲಾನ್ಯಾಸ ನಡೆಸುತ್ತಿರುವುದು ನನ್ನ ಸೌಭಾಗ್ಯ. ಈ ಮ್ಯೂಸಿಯಂ ಜನರಿಗೆ ಪ್ರರೇಣೆಯಾಗಲಿದೆ ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡಲಿದೆ ಎಂಬ ಭರವಸೆ ನನಗಿದೆ” ಎಂದರು.
ಕರ್ನಾಟಕದ ಭೂಮಿಯ ಮಹಾನ್ ಸಂತ ವಿಶ್ವೇಶ ತೀರ್ಥರನ್ನು ಕೂಡ ಮೋದಿ ಈ ಸಂದರ್ಭದಲ್ಲಿ ಸ್ಮರಿಸಿದರು, ಅವರ ಅಗಲುವಿಕೆ ದೇಶಕ್ಕೆ, ಆಧ್ಯಾತ್ಮಿಕತೆಗೆ ತುಂಬಾಲಾರದ ನಷ್ಟ ಎಂದರು.
ನಮ್ಮ ಈ ಕಾರ್ಯಕ್ರಮವು 21ನೇ ಶತಮಾನದ 3ನೇ ದಶಕಕ್ಕೆ ನಮ್ಮ ಪ್ರವೇಶದ ಸಂದರ್ಭದಲ್ಲಿ ನಡೆಯುತ್ತಿದೆ. 21ನೇ ಶತಮಾನದ ಮೊದಲ ದಶಕ ಅತ್ಯಂತ ಕಠಿಣವಾಗಿತ್ತು, ಆದರೆ 3ನೇ ದಶಕವನ್ನು ಬಲವಾದ ಅಡಿಪಾಯದೊಂದಿಗೆ ಶುರು ಮಾಡಿದ್ದೇವೆ. ಈ ಅಡಿಪಾಯ ನಮ್ಮ ಆಕಾಂಕ್ಷೆಯಾಗಿದೆ. ಹೊಸ ಭಾರತದ ಆಕಾಂಕ್ಷೆ, ಯುವಕರ, ಅಕ್ಕ ತಂಗಿಯರ, ಬಡವರ, ದಲಿತರ, ವಂಚಿತರ, ಪೀಡಿತರ, ಆದಿವಾಸಿಗಳ ಆಕಾಂಕ್ಷೆಯಾಗಿದೆ. ಸಮೃದ್ಧಿ ಮತ್ತು ಸಕ್ಷಮದ ಆಕಾಂಕ್ಷೆಯಾಗಿದೆ ಎಂದರು.
ದೇಶದ ಆಕಾಂಕ್ಷೆಯನ್ನು ಪೂರ್ಣಗೊಳಿಸುವುದಕ್ಕೆ ಸಾಮಾನ್ಯ ಜನರು ಸರ್ವೋಚ್ಛ ಆದ್ಯತೆಯನ್ನು ನೀಡಿದ್ದಾರೆ. ಜನರ ಆದ್ಯತೆ ನಮಗೆ ಪ್ರೇರಣೆಯಾಗಿದೆ. 2014ರ ನಂತರ ಸಾಮಾನ್ಯ ಜನರ ಜೀವನದಲ್ಲಿ ಸಾರ್ಥಕತೆಯನ್ನು ತರುವ ಅಭೂತಪೂರ್ವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.
ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳಿಗೆ ಪ್ರಾಮುಖ್ಯತೆ ನೀಡುವ ನಮ್ಮ ಪುರಾತನ ಸಂಸ್ಕೃತಿಯನ್ನು ಬಲಪಡಿಸಲು, ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸುವುದು. ನೀರಿನ ಸಂರಕ್ಷಣೆ ಮತ್ತು ನೀರು ಕೊಯ್ಲಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಾವು ಪಣತೊಡಬೇಕು ಎಂದು ಕರೆ ನೀಡಿದರು.
ಇಂದು ಪಾಕಿಸ್ಥಾನದ ದುರ್ವರ್ತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗಪಡಿಸುವ ಅವಶ್ಯಕತೆಯಿದೆ. ನಾನು ಸಂಸತ್ತಿನ ವಿರುದ್ಧ ಆಂದೋಲನ ನಡೆಸುವವರಿಗೆ ಹೇಳಲು ಬಯಸುವುದು ಏನೆಂದರೆ, ನಿಮಗೆ ನಿಜಕ್ಕೂ ಆಂದೋಲನ ನಡೆಸಬೇಕೆಂದಿದ್ದರೆ ಕಳೆದ 70 ವರ್ಷಗಳಲ್ಲಿ ಪಾಕಿಸ್ಥಾನ ನಡೆಸುತ್ತಿರುವ ಶೋಷಣೆಗಳ ವಿರುದ್ಧ ಆಂದೋಲನ ನಡೆಸಿ, ಅದರ ವಿರುದ್ಧ ಧ್ವನಿ ಎತ್ತಿ ಎಂದು ಕಿವಿ ಮಾತು ಹೇಳಿದರು. ಪಾಕಿಸ್ಥಾನದ ವಿರುದ್ಧ ಕಾಂಗ್ರೆಸ್ ಎಂದಿಗೂ ಮಾತನಾಡುವುದಿಲ್ಲ ಎಂದು ಟಾಂಗ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.