ಶಿವಮೊಗ್ಗ : ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ಶಿವಮೊಗ್ಗದಲ್ಲಿನ ಪಶ್ಚಿಮ ಘಟ್ಟದ ಕಾರ್ಯಪಡೆ ಒಂದು ದಶಕದ ಸಮಯ ಮತ್ತು ಪರಿಶ್ರಮವನ್ನು ಮೀಸಲಿಟ್ಟು ಬಂಜರು ಭೂಮಿಯನ್ನು ಔಷಧೀಯ ಸಸ್ಯ ಉದ್ಯಾನವನವನ್ನಾಗಿ ಪರಿವರ್ತಿಸಿದೆ.
“ಕಳೆದ ಹತ್ತು ವರ್ಷಗಳಿಂದ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಪಶ್ಚಿಮ ಘಟ್ಟದಿಂದ ಅಪರೂಪದ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂಗ್ರಹಿಸಿ ಇಲ್ಲಿ ನೆಟ್ಟಿದ್ದೇವೆ. ಇದು ನೈಸರ್ಗಿಕ ಆಮ್ಲಜನಕ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಇದು ನಮ್ಮ ರಾಜ್ಯಕ್ಕೇ ಮಾದರಿ ಎನಿಸಿದೆ, ಮಾತ್ರವಲ್ಲದೇ ಶಿವಮೊಗ್ಗದಲ್ಲಿ ತೆಗೆದುಕೊಂಡ ಅತ್ಯಂತ ವಿಶಿಷ್ಟ ಹೆಜ್ಜೆ” ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಎ. ಎಚ್. ಆಶಿಸರಾ ತಿಳಿಸಿದ್ದಾರೆ.
ಈ ಯೋಜನೆಯನ್ನು ಇತರ ರಾಜ್ಯಗಳಲ್ಲಿಯೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
“ಪರಿಸರವನ್ನು ಉಳಿಸುವ ಸಲುವಾಗಿ ನಾವು ಈ ಹೆಜ್ಜೆ ಇಟ್ಟಿದ್ದೇವೆ. ನಾವು ಖಂಡಿತವಾಗಿಯೂ ನಮ್ಮ ಹಸಿರು ಯೋಜನೆಯನ್ನು ರಾಜ್ಯದ ಇತರ ನಗರಗಳಿಗೆ ವಿಸ್ತರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, 60 ವರ್ಷದ ವ್ಯಕ್ತಿಯೊಬ್ಬರು ಪ್ರಕೃತಿಗೆ ಕೊಡುಗೆ ನೀಡುವ ಸಲುವಾಗಿ ಶಿವಮೊಗ್ಗ-ಶಿಕಾರಿಪುರ ಹೆದ್ದಾರಿಯಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಅಲ್ಲಿ ಈಶ್ವರ ವನ ಎಂಬ ಮಿನಿ ಅರಣ್ಯವನ್ನು ರಚಿಸಿದ್ದಾರೆ. ಇದು ಗಾಳಿಯನ್ನು ಸ್ವಚ್ಛಗೊಳಿಸುವುದಲ್ಲದೆ, ಉತ್ತಮ ಗೂಡುಕಟ್ಟುವ ತಾಣವನ್ನು ಕಂಡುಹಿಡಿಯಲು ಪಕ್ಷಿಗಳಿಗೆ ಸಹಾಯ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.