ಪುತ್ತೂರು: ಡಿಸೆಂಬರ್ 29, ಭಾನುವಾರ ಬೆಳಗ್ಗೆ 9.00 ರಿಂದ ರಾತ್ರಿ 7.30 ರವರೆಗೆ, ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಮಂಗಳೂರು ವಿಭಾಗದ (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ) ಸಾವಿರಕ್ಕೂ ಮಿಕ್ಕಿದ ಭಜನಾ ಮಂಡಳಿಗಳ ‘ಭಜನಾ ಸಂಭ್ರಮ 2019’ ಸಮಾವೇಶವನ್ನು ಆಯೋಜಿಸಲಾಗಿದೆ.
ನಮ್ಮ ಹಿಂದೂ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆ, ವ್ಯಸನಮುಕ್ತ ಸಮಾಜ, ಸಂಸ್ಕಾರಯುಕ್ತ ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಭಜನಾ ಮಂಡಳಿಗಳ ಪಾತ್ರ ಬಹುಮುಖ್ಯವಾದದ್ದು. ಈ ರೀತಿಯ ಸಾಮಾಜಿಕ ಕಾಳಜಿಯುಳ್ಳ ಭಜನಾ ಮಂಡಳಿಗಳು ಒಂದೆಡೆ ಸೇರಿ ಸಮಾಜಮುಖಿ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ಹಿನ್ನೆಲೆಯಲ್ಲಿ, ಭಜನಾ ಮಂಡಳಿಗಳನ್ನು ಸಕ್ರಿಯಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ.
ಇದೇ ದಿನ ರಾತ್ರಿ 7:30 ರಿಂದ 10 ಗಂಟೆಯವರೆಗೆ ಆಳ್ವಾಸ್ ದೇಶಿ ಸಾಂಸ್ಕೃತಿಕ ವೈಭವ, ಕಾರ್ಯಕ್ರಮ ಕಲಾಸಕ್ತರಿಗೆ ರಸದೌತಣ ಆಯೋಜಿಸಲಾಗಿದೆ.
ಬೆಳಿಗ್ಗೆ 9.00 ರಿಂದ ಭಜನಾ ಮಂಡಳಿಗಳು ಮಾಡಬಹುದಾದ, ಈಗ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ವಿಚಾರ-ವಿಮರ್ಶೆ ನಡೆಸುವ ಗೋಷ್ಠಿಗಳು ನಡೆಯಲಿದೆ ಮತ್ತು 3 ಗಂಟೆಗೆ ಸರಿಯಾಗಿ ಶೋಭಾಯಾತ್ರೆ ಜರುಗಲಿದೆ.
ಸಂಜೆ 4.45 ಕ್ಕೆ, ರಾಷ್ಟ್ರೀಯ ನಾಯಕರನ್ನು ಒಳಗೊಂಡ ಸಭಾಕಾರ್ಯಕ್ರಮ. ಸೂರ್ಯಾಸ್ತಕ್ಕೆ ಸರಿಯಾಗಿ 1000 ದೀಪಗಳನ್ನು ಬೆಳಗಿಸಿ, 5000 ಭಜನಾ ಕಾರ್ಯಕರ್ತರಿಂದ 5000 ಹಣತೆ ಉರಿಸಿ, ಈಗಾಗಲೇ ಆಯ್ಕೆ ಮಾಡಿರುವ 6 ಭಜನೆಗಳನ್ನು ಹಾಡುವ “ಭಜನಾ ಸಂಭ್ರಮ 2019” ನೆರವೇರಲಿದೆ.
ಸಂಜೆ 4.45 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸಹಸರಕಾರ್ಯವಾಹ ಶ್ರೀಯುತ ಮುಕುಂದ ಅವರಿಂದ ಮಾರ್ಗದರ್ಶನ, ಪಶುಸಂಗೋಪನಾ ಹಾಗೂ ಹೈನುಗಾರಿಕೆ ಖಾತೆ ರಾಜ್ಯ ಸಚಿವರಾದ ಶ್ರೀ ಪ್ರತಾಪಚಂದ್ರ ಸಾರಂಗಿ ಅವರಿಂದ ಶುಭನುಡಿಗಳು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಡಾಕ್ಟರ್ ಮೋಹನ್ ಆಳ್ವ ಅವರಿಂದ ಅತಿಥಿಗಳ ಸ್ವಾಗತ, ಪರಿಚಯ, ಪ್ರಸ್ತಾವನೆ & ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡೆಸಲಿದ್ದಾರೆ.
ಜಿಲ್ಲೆಯಾದ್ಯಂತ ಸಾವಿರಾರು ಭಜನಾ ಮಂಡಳಿಗಳಿದ್ದು, ಹಳ್ಳಿಹಳ್ಳಿಗಳಲ್ಲಿ ವ್ಯಾಪಿಸಿರುವ ಭಜನಾ ಮಂಡಳಿಗಳನ್ನು ಒಂದೆಡೆ ಸೇರಿಸಿ ಸಂಪೂರ್ಣ ಹಿಂದೂ ಸಮಾಜಕ್ಕೆ ಚೈತನ್ಯವನ್ನು ತುಂಬುವ, ಆ ಮೂಲಕ ಸಮಾಜ ಸಮರ್ಪಿತ ಬೃಹತ್ ಕಾರ್ಯಕರ್ತರ ಪಡೆಯನ್ನು ಕಟ್ಟುವ ಉದ್ದೇಶ ಹೊಂದಿರುವ ಐತಿಹಾಸಿಕ ಕಾರ್ಯಕ್ರಮ ಇದಾಗಿದೆ.
ಮಂಗಳೂರು ವಿಭಾಗದಲ್ಲಿ ಕಳೆದ 70 ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿನ ಸ್ವಯಂಸೇವಕರು ಕಟ್ಟಿರುವ ಭಜನಾ ಮಂದಿರಗಳು, ಊರಿನ ಎಲ್ಲರನ್ನು ಒಳಗೊಂಡು, ಮನೆಮನೆ ಭಜನೆ ಮೂಲಕ ಇಡೀ ಹಿಂದೂ ಸಮಾಜದಲ್ಲಿನ ಮೇಲು-ಕೀಳು ಭಾವವನ್ನು ನಿವಾರಿಸಿವೆ. ನ್ಯಾಯಾಲಯದ ಮೆಟ್ಟಿಲೇರದೆ, ವ್ಯಾಜ್ಯಗಳನ್ನು ಪರಿಹರಿಸಿವೆ.
ಕಾರ್ಯಕ್ರಮ ಮುಕ್ತಾಯದ ಬಳಿಕ, ಸಮಾಜ ಪರಿವರ್ತನೆಯ ಸತ್ ಸಂಕಲ್ಪದೊಂದಿಗೆ ತಮ್ಮ ಊರಿಗೆ ತೆರಳುವ ಎಲ್ಲಾ ಹಿಂದೂ ಬಂಧುಗಳಿಗೆ ಆಹಾರದ ಪೂರೈಕೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.