ಬೆಂಗಳೂರು: ದೇಶದ ಅತಿದೊಡ್ಡ ತಂತ್ರಜ್ಞಾನ ಮೇಳ ‘ಬೆಂಗಳೂರು ಟೆಕ್ ಸಮಿಟ್’ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಜರಗುತ್ತಿದೆ. ಎಲ್ಲಾ ಕ್ಷೇತ್ರಗಳಿಗೂ ತಂತ್ರಜ್ಞಾನವನ್ನು ವಿಸ್ತರಿಸುವ ಗುರಿಯಿಟ್ಟುಕೊಂಡು ಈ ಟೆಕ್ ಮೇಳವನ್ನು ಆಯೋಜನೆಗೊಳಿಸಲಾಗುತ್ತಿದೆ.
ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮೇಳಕ್ಕೆ ಚಾಲನೆಯನ್ನು ನೀಡುತ್ತಿದ್ದಾರೆ.
ನ.18 ರಿಂದ 20ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಟೆಕ್ ಮೇಳ ಜರುಗುತ್ತಿದೆ. ಇದರಲ್ಲಿ ದೇಶ ವಿದೇಶಗಳ 3000ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿಯಾಗುತ್ತಿದ್ದಾರೆ. ಇದರಲ್ಲಿ ನಡೆಯುವ ರೋಬೋಟಿಕ್ ಸ್ಟರ್ಧೆಯಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ. 200ಕ್ಕೂ ಹೆಚ್ಚು ತಂತ್ರಜ್ಞರು, ತಜ್ಞರು ವಿಚಾರ ಮಂಡನೆಗೊಳಿಸುತ್ತಿದ್ದಾರೆ. 250 ಪ್ರದರ್ಶನ ಮಳಿಗೆಗಳು ಇರಲಿವೆ. 200 ಸ್ಟಾರ್ಟ್ಅಪ್ ಗಳಿಗೆ ಭಾಗವಹಿಸುವ ಅವಕಾಶವಿದೆ. ಸುಮಾರು 12 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ.
ಮೇಳದ ಅತಿಥಿಗಳಾಗಿ ಉಜ್ಬೇಕಿಸ್ತಾನ್ ಗಣರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನಗಳ ಅಭಿವೃದ್ಧಿ ಉಪಸಚಿವ ಉಮರೊವ್ ಮುಷಮಾ ಜಾನೋವಿಚ್, ಡಿಆರ್ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಮುಂತಾದವರು ಭಾಗಿಯಾಗಲಿದ್ದಾರೆ. ಭಾರತದ ಬ್ರಿಟಿಷ್ ಹೈಕಮಿಷನರ್ ಸರ್ ಡೊಮಿನಿಕ್ ಅಂಥೋನಿ ಜೆರಾರ್ಡ್ ಅಸ್ಕ್ವಿತ್ ಹಾಗೂ ಆಸ್ಪ್ರೇಲಿಯಾ, ನೆದರ್ಲ್ಯಾಂಡ್, ಲೆಥುವೇನಿಯಾ ರಾಯಭಾರಿಗಳು ಭಾಗಿಯಾಗುತ್ತಿದ್ದಾರೆ.
ಸ್ಮಾರ್ಟ್ ಐಟಿ, ಸ್ಮಾರ್ಟ್ ಬಯೋ, ಜಾಗತಿಕ ಆವಿಷ್ಕಾರಗಳ ಸಮ್ಮಿಲನ ಮತ್ತು ಪರಿಣಾಮ ಎಂಬ ನಾಲ್ಕು ಪ್ರಕಾರಗಳ ಅಧಿವೇಶನಗಳು, 39ಕ್ಕೂ ಅಧಿಕ ಗೋಷ್ಠಿಗಳು ನಡೆಯಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.