ಬೆಳಗಾವಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ರಾಜ್ಯಮಟ್ಟದ ಕಾನೂನು ವಿದ್ಯಾರ್ಥಿಗಳ 2 ದಿನಗಳ ಕಾರ್ಯಾಗಾರವು ಬೆಳಗಾವಿಯ ವಿ.ಟಿ.ಯು ಕ್ಯಾಂಪಸಿನಲ್ಲಿ ನವೆಂಬರ್ 16, 17 ರಂದು ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಪ್ರಕರಣಗಳ ಬರವಣಿಗೆ ಕೌಶಲ್ಯ ಮತ್ತು ಪ್ರಸ್ತುತತೆ, ಅಣುಕು ನ್ಯಾಯಾಲಯದ ಮಾದರಿಯಲ್ಲಿ ಕ್ಲಾಸ್ ರೂಂ ಟು ಕೋರ್ಟ್ ರೂಂ, ಸಂಸ್ಕೃತಿ, ಭಾಷೆ, ಅಭಿವೃದ್ಧಿ, ಆಹಾರ, ಧರ್ಮ ಮತ್ತು ಇತರೆ ವಿಷಯಗಳಲ್ಲಿ ಭಾರತವನ್ನು ವಿಭಜಿಸುತ್ತಿರುವ ಮತ್ತು ಶಕ್ತಿಯನ್ನು ಕಾನೂನು ರೀತಿಯಲ್ಲಿ ಎದುರಿಸುವಲ್ಲಿ ಯುವ ವಕೀಲರ ಪಾತ್ರ, ಕಾನೂನು ಯೋಧರು ಎಂಬ ವಿಷಯದ ಅಡಿಯಲ್ಲಿ ಆರ್.ಟಿ.ಐ, ಮಹಿಳೆ ಮತ್ತು ಮಕ್ಕಳ ಕಾನೂನು, ಮಾನವ ಹಕ್ಕುಗಳು, ಪರಿಸರ ಕಾನೂನು ಮತ್ತು ಸೈಬರ್ ಕಾನೂನು ಸೇರಿದಂತೆ ಸಮನಾಂತರ ಗೋಷ್ಟಿಗಳನ್ನು ನಡೆಸಲಾಗುತ್ತದೆ.
ಕಾರ್ಯಾಗಾರದ ಪೋಸ್ಟರನ್ನು ನಗರದ ಪ್ರತಿಷ್ಟಿತ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ||ತಾರಾನಾಥ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಎಬಿವಿಪಿಯ ಮಂಗಳೂರು ಮಹಾನಗರ ಕಾರ್ಯದರ್ಶಿ ಮಣಿಕಂಠ ಕಳಸ, ನಗರ ಸಂಘಟನಾ ಕಾರ್ಯದರ್ಶಿ ವೀರೇಶ್, ಅಜ್ಜಣ್ಣನವರ, ನಗರ ಸಹಕಾರ್ಯದರ್ಶಿ ಶ್ರೇಯಸ್ ಹಾಗೂ ಅಭಿಲಾಷ್, ಚರಣ್ರಾಜ್ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.