ನವದೆಹಲಿ: ಪಾಕಿಸ್ಥಾನ ಮತ್ತೊಮ್ಮೆ ತನ್ನ ನರಿ ಬುದ್ಧಿಯನ್ನು ಪ್ರದರ್ಶನ ಮಾಡಿದೆ. ಕಾರ್ತಾರ್ಪುರ್ ಸಾಹಿಬ್ಗೆ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಅದು ಬಿಡುಗಡೆ ಮಾಡಿದ ವಿಡಿಯೋ ಹಾಡು ವಿವಾದವನ್ನು ಸೃಷ್ಟಿಸಿದೆ, ಯಾಕೆಂದರೆ ವಿಡಿಯೋ ತುಣುಕಿನ ಒಂದು ಭಾಗದ ಹಿನ್ನೆಲೆಯಲ್ಲಿ ಜರ್ನೈಲ್ ಸಿಂಗ್ ಭಿಂದ್ರಾನ್ವಾಲೆ ಸೇರಿದಂತೆ ಮೂವರು ಖಲಿಸ್ಥಾನಿ ಪ್ರತ್ಯೇಕತಾವಾದಿ ನಾಯಕರ ಚಿತ್ರಗಳಿವೆ.
ಪಾಕಿಸ್ಥಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಈ ವಿಡಿಯೋದಲ್ಲಿ ಭಿಂದ್ರಾನ್ವಾಲೆ, ಮೇಜರ್ ಜನರಲ್ ಶಬೇಗ್ ಸಿಂಗ್ ಮತ್ತು ಅಮರಿಕ್ ಸಿಂಗ್ ಖಲ್ಸಾ ಅವರ ಪೋಸ್ಟರ್ಗಳಿವೆ, ಇವರೆಲ್ಲರೂ ಜೂನ್ 1984 ರಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ಭಾರತೀಯ ಸೇನೆಯು ನಡೆಸಿದ ಆಪರೇಷನ್ ಬ್ಲೂ ಸ್ಟಾರ್ ಸಂದರ್ಭದಲ್ಲಿ ಕೊಲ್ಲಲ್ಪಟ್ಟವರಾಗಿದ್ದಾರೆ.
ಭಿಂದ್ರಾನ್ವಾಲೆ ಸಿಖ್ ಧಾರ್ಮಿಕ ಪಂಥದ ದಮದಮಿ ತಕ್ಸಲ್ ಮುಖ್ಯಸ್ಥನಾಗಿದ್ದನು. ಸಿಂಗ್ ಭಾರತೀಯ ಸೇನಾ ಜನರಲ್ ಆಗಿದ್ದ, ಹುದ್ದೆ ತ್ಯಜಿಸಿ ಆತ 1984 ರಲ್ಲಿ ಖಲಿಸ್ಥಾನಿ ಚಳವಳಿಗೆ ಸೇರ್ಪಡೆಗೊಂಡ, ಖಲ್ಸಾ ಖಲಿಸ್ಥಾನಿ ವಿದ್ಯಾರ್ಥಿ ನಾಯಕನಾಗಿದ್ದು, ನಿಷೇಧಿತ ಅಖಿಲ ಭಾರತ ಸಿಖ್ ವಿದ್ಯಾರ್ಥಿ ಒಕ್ಕೂಟದ (ಎಐಎಸ್ಎಸ್ಡಿ) ಮುಖ್ಯಸ್ಥನಾನೂ ಕೂಡ ಆಗಿದ್ದ.
ಹಿಂದೆ ಪಂಜಾಬ್ನಲ್ಲಿ ಸಿಖ್ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸಲು ಪಾಕಿಸ್ಥಾನವು ಕಾರಿಡಾರ್ ಅನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವ್ಯಕ್ತಪಡಿಸಿದ್ದರು. ಹಲವಾರು ಭಾರತೀಯ ಗುಪ್ತಚರ ಸಂಸ್ಥೆಗಳು ಮತ್ತು ತಜ್ಞರು ಈ ಮಾರ್ಗವನ್ನು ತೆರೆಯುವ ಪಾಕಿಸ್ಥಾನದ ಉದ್ದೇಶಗಳನ್ನು ಪ್ರಶ್ನಿಸಿದ್ದಾರೆ.
ಇದೀಗ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ಕೆಲವೇ ದಿನಗಳ ಮೊದಲು ಈ ವಿಡಿಯೋ ಕಾಣಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8 ರಂದು ಭಾರತದ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದರೆ, ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮರುದಿನ ಇನ್ನೊಂದು ಬದಿಯ ಮಾರ್ಗವನ್ನು ಉದ್ಘಾಟನೆಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.