ಚೆನ್ನೈ: ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹತ್ವದ ಸಾಧನೆಯೊಂದನ್ನು ಮಾಡಿದೆ. ದೇಶದ ಮೊದಲ ದೇಶೀಯವಾಗಿ ನಿರ್ಮಾಣ ಮಾಡಿದ ಸ್ಟ್ಯಾಂಡಿಂಗ್ ವ್ಹೀಲ್ಚೇರ್ ಅನ್ನು ಅನಾವರಣಗೊಳಿಸಿದೆ. ‘ಅರೈಸ್’ ಎಂಬ ಹೆಸರಿನ ಈ ವ್ಹೀಲ್ಚೇರ್ ದಿವ್ಯಾಂಗರಿಗೆ ದಿನನಿತ್ಯದ ಕಾರ್ಯವನ್ನು ಮಾಡಲು ಬಹಳ ಪ್ರಯೋಜನಕಾರಿಯಾಗಿದೆ.
ಈ ಕಸ್ಟಮೈಸ್ ಮಾಡಿದ ವ್ಹೀಲ್ಚೇರ್ಗಳು ವಿಭಿನ್ನ ಸಾಮರ್ಥ್ಯ ಹೊಂದಿರುವ ವ್ಯಕ್ತಿಯನ್ನು ಕುಳಿತುಕೊಂಡ ಸ್ಥಿತಿಯಿಂದ ನಿಂತಿರುವ ಸ್ಥಿತಿಗೆ ಬದಲಾಯಿಸಬಲ್ಲದು ಮತ್ತು ನಿಂತಿರುವ ಸ್ಥಿತಿಗೆ ಕುಳಿತುಕೊಂಡ ಸ್ಥಿತಿಗೆ ತರಬಲ್ಲದು. ಈ ಪ್ರಕ್ರಿಯೆಯನ್ನು ದಿವ್ಯಾಂಗ ವ್ಯಕ್ತಿ ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ಮಾಡಬಹುದಾಗಿದೆ.
‘ಅರೈಸು’ ಗಾಳಿಕುರ್ಚಿಯ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರು ಭಾಗಿಯಾಗಿದ್ದರು.
ಐಐಟಿ ಮದ್ರಾಸ್ನ ಪ್ರಯತ್ನವನ್ನು ಶ್ಲಾಘಿಸಿದ ಗೆಹ್ಲೋಟ್, “ಐಐಟಿ ಮದ್ರಾಸ್ ಅದ್ಭುತ ಕೆಲಸ ಮಾಡಿದೆ, ವಿದೇಶದಲ್ಲಿ ಸಹ ಇಂತಹ ಗಾಲಿಕುರ್ಚಿಯನ್ನು ನಾನು ನೋಡಿಲ್ಲ” ಎಂದಿದ್ದಾರೆ.
ಈ ಉಪಕ್ರಮದ ಪ್ರಯೋಜನಗಳನ್ನು ಹೆಚ್ಚು ಹೆಚ್ಚು ದಿವ್ಯಾಂಗ ನಾಗರಿಕರಿಗೆ ವಿಸ್ತರಿಸಲು ಸಚಿವಾಲಯ ಅಗತ್ಯವಾದ ಸಹಾಯವನ್ನು ಮಾಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
“ದೇಶಾದ್ಯಂತದ ದಿವ್ಯಾಂಗರಿಗೆ ಈ ಗಾಲಿಕುರ್ಚಿಯನ್ನು ಒದಗಿಸಲು ನನ್ನ ಸಚಿವಾಲಯ ಐಐಟಿ ಮದ್ರಾಸ್ನೊಂದಿಗೆ ಸಹಕರಿಸಬೇಕೆಂದು ನಾನು ಬಯಸುತ್ತೇನೆ. ಅಗತ್ಯವಿದ್ದಲ್ಲಿ ನನ್ನ ಸಚಿವಾಲಯವು ಈ ಉಪಕ್ರಮಕ್ಕೆ ಆರ್ಥಿಕವಾಗಿ ಸಹಾಯವನ್ನೂ ಮಾಡುತ್ತದೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.