ಬ್ಯಾಂಕಾಕ್: ಪ್ರಧಾನಿ ನರೇಂದ್ರ ಮೋದಿಯವರು ಥಾಯ್ಲೆಂಡಿನಲ್ಲಿ ಸಮುದಾಯ ಕಾರ್ಯಕ್ರಮದಲ್ಲಿ ಗುರುನಾನಕ್ ದೇವ್ ಅವರ 555 ಜನ್ಮ ವರ್ಷಾಚರಣೆಯ ಪ್ರಯುಕ್ತ ನಾಣ್ಯವನ್ನು ಬಿಡುಗಡೆಗೊಳಿಸಿದರು. ಅಲ್ಲದೆ ತಮಿಳಿನ ಸುಪ್ರಸಿದ್ಧ ಗ್ರಂಥ ‘ತಿರುಕ್ಕುರಲ್’ನ ಥಾಯ್ ಭಾಷಾಂತರವನ್ನು ಅನಾವರಣಗೊಳಿಸಿದರು.
ಶನಿವಾರ ಥಾಯ್ಲೆಂಡಿಗೆ ತೆರಳಿರುವ ಮೋದಿಯವರು ಅಲ್ಲಿ ಭಾರತೀಯ ಸಮುದಾಯ ತಮಗಾಗಿ ಆಯೋಜನೆ ಗೊಳಿಸಿದ ‘ಸಾವಸ್ದಿ ಪಿಎಂ ಮೋದಿ’ ಉದ್ದೇಶಿಸಿ ಮಾತನಾಡಿದರು.
ತಿರುಕುರಲ್ ಅನ್ನು ತಮಿಳಿನ ಸುಪ್ರಸಿದ್ಧ ಕವಿ ತಿರುವಲ್ಲುವರ್ ಬರೆದಿದ್ದು, ಈಗಾಗಲೇ ಈ ಗ್ರಂಥ ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿದೆ. ಇದೇ ಮೊದಲ ಬಾರಿಗೆ ಥಾಯ್ಲೆಂಡ್ ಇದನ್ನು ಥಾಯ್ ಭಾಷೆಗೆ ಭಾಷಾಂತರಗೊಳಿಸಲಾಗಿದೆ. ಇದನ್ನು ಪ್ರಧಾನಿಯವರು ಅನಾವರಣಗೊಳಿಸಿದರು. ಅಲ್ಲದೆ ಗುರುನಾನಕ್ ದೇವ್ ಅವರ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆಗೊಳಿಸಿದರು.
ಥೈಲ್ಯಾಂಡಿನಲ್ಲಿ ಸುಮಾರು 25,000 ಭಾರತೀಯರು ನೆಲೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.