ಭುವನೇಶ್ವರ: ಹುಲಿಗಳನ್ನು ಸಂರಕ್ಷಿಸುವಂತೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ ಕೋಲ್ಕತ್ತಾದ ದಂಪತಿಗಳು “ಹುಲಿಗಳಿಗಾಗಿ ಪ್ರಯಾಣ” ಎಂಬ ಮೋಟಾರು ಬೈಕ್ ಅಭಿಯಾನವನ್ನು ನಡೆಸುತ್ತಿದ್ದಾರೆ.
ರತಿಂದ್ರ ದಾಸ್ ಮತ್ತು ಗೀತಾಂಜಲಿ ದಂಪತಿ ಫೆಬ್ರವರಿ 15 ರಂದು ಪಶ್ಚಿಮ ಬಂಗಾಳದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಇದುವರೆಗೆ ಒರಿಸ್ಸಾ ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 28 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ರತೀಂದ್ರ ದಾಸ್ ಅವರು, “ನಾನು ಫೆಬ್ರವರಿ 15, 2019ರಿಂದ ಗೀತಾಂಜಲಿಯೊಂದಿಗೆ ಪಶ್ಚಿಮ ಬಂಗಾಳದಿಂದ ‘ಹುಲಿಗಳಿಗಾಗಿ ಪ್ರಯಾಣ” ಅಭಿಯಾನವನ್ನು ಪ್ರಾರಂಭಿಸಿದ್ದೇನೆ. ನಾವು ಅಸ್ಸಾಂ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಚಂಡೀಗಢ, ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಭಾರತದ ಇನ್ನೂ ಅನೇಕ ರಾಜ್ಯಗಳಿಗೆ ಇದುವರೆಗೆ ಪ್ರಯಾಣಿಸಿದ್ದೇವೆ. ನಾವು 28 ರಾಜ್ಯಗಳನ್ನು 35 ಸಾವಿರ ಕಿಲೋಮೀಟರ್ಗಳೊಂದಿಗೆ ಪೂರ್ಣಗೊಳಿಸಿದ್ದೇವೆ ಮತ್ತು ಪ್ರವಾಸದಲ್ಲಿ ಸುಮಾರು 26,000 ಜನರಿಗೆ ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದೇವೆ” ಎಂದಿದ್ದಾರೆ.
ಸಾಮಾಜಿಕ ಜಾಲತಾಣ ಸಂಪರ್ಕ ಮತ್ತು ಸ್ನೇಹಿತರ ಮೂಲಕ ತಮ್ಮ ಪ್ರಯಾಣಕ್ಕೆ ಹಣ ಹೊಂದಿಸುತ್ತಿದ್ದೇವೆ ಎಂದಿದ್ದಾರೆ.
“ಮಾನವನ ಜೀವನದಲ್ಲಿ ಹುಲಿಗಳ ನಿಜವಾದ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಪ್ರಯಾಣದ ಉದ್ದೇಶವಾಗಿದೆ. ಕಾಡುಗಳು ಇದ್ದರೆ ಮಾತ್ರ ನಾವು ಉಸಿರಾಡಬಹುದು. ಕಾಡುಗಳು ಉಳಿಯಬೇಕಾದರೆ ಹುಲಿಗಳು ಬೇಕು. ನಾವು ಕೇವಲ ಗ್ರಾಮೀಣ ಪ್ರದೇಶಗಳ ಜನರನ್ನು ತಲುಪುವುದು ಮಾತ್ರವಲ್ಲ, ನಗರದ ಜನರಲ್ಲೂ ಅರಿವು ಮೂಡಿಸುತ್ತಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.