ಹೈದರಾಬಾದ್ : ಆಂಧ್ರಪ್ರದೇಶದ ನೆಲ್ಲೂರಿನ ನಾಯ್ಡುಪೇಟ ಬಳಿಯ ಗೊಟ್ಟಿಪ್ರೊಲು ಎಂಬಲ್ಲಿ ಪುರಾತತ್ವ ಸರ್ವೇಕ್ಷಣಾ (ಎಎಸ್ಐ) ತಂಡವು ನಡೆಸಿದ 1ನೇ ಹಂತದ ಉತ್ಖನನದ ವೇಳೆ ಕ್ರಿ.ಪೂ 1-2 ನೇ ಶತಮಾನದ ನಡುವಿನ ಕಾಲಘಟ್ಟದ ಎಂದು ಹೇಳಲಾದ ಹೂತು ಹೋಗಿದ್ದ ಬೃಹತ್ ಇಟ್ಟಿಗೆ ಆವರಣದ ಅವಶೇಷಗಳು ಪತ್ತೆಯಾಗಿವೆ.
ಗೊಟ್ಟಿಪ್ರೊಲು ಸ್ಥಳವು ನಾಯ್ಡುಪೇಟೆಯಿಂದ ಪೂರ್ವಕ್ಕೆ 17 ಕಿಲೋಮೀಟರ್ ಮತ್ತು ತಿರುಪತಿ ಮತ್ತು ನೆಲ್ಲೂರಿನಿಂದ 9 ಕಿಲೋಮೀಟರ್ ದೂರದಲ್ಲಿರುವ ಸ್ವರ್ಣಮುಖಿ ನದಿಯ ಬಲ ದಂಡೆಯಲ್ಲಿದೆ.
ಉತ್ಖನನವು ವಿವಿಧ ಗಾತ್ರಗಳು ಮತ್ತು ರೂಪಗಳಲ್ಲಿನ ಇಟ್ಟಿಗೆ ನಿರ್ಮಿತ ರಚನೆಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ. ಸಿಕ್ಕಿರುವ ಇಟ್ಟಿಗೆ ಗಾತ್ರಗಳು 43 – 48 ಸೆಂ. ಮೀ. ಆಗಿದೆ. ಅಮರಾವತಿ ಮತ್ತು ನಾಗಾರ್ಜುನಕೊಂಡದ ಕೃಷ್ಣ ಕಣಿವೆಯಲ್ಲಿನ ಶಾತವಾಹನ ಅಥವಾ ಇಕ್ಷ್ವಾಕು ಕಾಲದ ರಚನೆಗಳೊಂದಿಗೆ ಈ ಇಟ್ಟಿಗೆಗಳನ್ನು ಹೋಲಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಈ ಅವಶೇಷಗಳ ಹೊರತಾಗಿ, ಹಳ್ಳಿಯ ಪಶ್ಚಿಮ ಭಾಗದಲ್ಲಿ ಸಮಾಧಿ ಮಾಡಲಾದ ವಿಷ್ಣು ಶಿಲ್ಪವನ್ನು ಕಂಡುಹಿಡಿಯಲಾಗಿದೆ. ಇದು ಒಂದು ಪ್ರಮುಖ ಶೋಧವೆಂದೇ ಪರಿಗಣಿಸಲಾಗಿದೆ. 2 ಮೀಟರ್ ಎತ್ತರದ ವಿಷ್ಣುವಿನ ಪ್ರತಿಮೆ ಇದೆಂದು ಹೇಳಲಾಗಿದೆ.
ನಾಲ್ಕು ಕೈಗಳನ್ನು ವಿಷ್ಣು ಹೊಂದಿದ್ದು, ಮೇಲಿನ ಬಲ ಮತ್ತು ಎಡಗೈಯಲ್ಲಿ ಚಕ್ರ ಮತ್ತು ಶಂಖವನ್ನು ಹೊಂದಿದ್ದಾರೆ. ಪೀಠದ ಮೇಲೆ ನಿಂತಿರುವ ಭಂಗಿಯಲ್ಲಿ ವಿಷ್ಣು ನಿಂತಿದ್ದಾನೆ. ಕೆಳಗಿನ ಬಲ ಕೈಯಲ್ಲಿ ವರವನ್ನು ನೀಡುತ್ತಿದ್ದಾನೆ ಮತ್ತು ಎಡಗೈ ಕತಿಹಸ್ಥ ಭಂಗಿಯಲ್ಲಿದೆ.
ತಾಮ್ರ ಮತ್ತು ಸೀಸದ ನಾಣ್ಯಗಳು, ಕಬ್ಬಿಣದ ಈಟಿ, ಕಲ್ಲಿನ ರಚನೆಗಳು, ಮಣಿಗಳು, ಕಿವಿಯೋಲೆ ಮುಂತಾದ ಹಲವು ಪ್ರಮುಖ ಪ್ರಾಚೀನ ವಸ್ತುಗಳು ಕೂಡ ಪತ್ತೆಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.