ಕೆವಾಡಿಯಾ : ಭಾರತದ ಏಕತೆಯ ಮೇಲೆ ನಡೆಯುವ ಪ್ರತಿ ದಾಳಿಯ ವಿರುದ್ಧ ನಾವು ಹೋರಾಡುತ್ತೇವೆ ಮತ್ತು ಸೋಲಿಸುತ್ತೇವೆ. ಸರ್ದಾರ್ ಪಟೇಲರಿಂದ ಸ್ಪೂರ್ತಿಯನ್ನು ಪಡೆದುಕೊಂಡು, ಭಾರತದ ಭಾವನಾತ್ಮಕ, ಆರ್ಥಿಕ ಮತ್ತು ಸಾಂವಿಧಾನಿಕ ಏಕೀಕರಣವನ್ನು ಬಲಿಷ್ಠಗೊಳಿಸುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಗುಜರಾತ್ನ ಕೆವಾಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಏಕತಾ ದಿನದ ಹಿನ್ನಲೆಯಲ್ಲಿ ಗುಜರಾತ್ನ ಕೆವಾಡಿಯಾದಲ್ಲಿ ನಿರ್ಮಾಣ ಮಾಡಲಾದ ವಿಶ್ವದ ಅತೀ ಎತ್ತರದ ಏಕತಾ ಪ್ರತಿಮೆಗೆ ನಮನ ಸಲ್ಲಿಸಿದ ಮೋದಿ, ಬಳಿಕ ಏಕತಾ ದಿವಸ್ ಪರೇಡ್ನಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದ ಉಕ್ಕಿನ ಮನುಷ್ಯನ ಜನ್ಮದಿನವಾದ ಇಂದು ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಹೊಸ ಭವಿಷ್ಯದತ್ತ ಹೆಜ್ಜೆ ಇಡುತ್ತಿವೆ. ಕಾಶ್ಮೀರದ ವಿಷಯವನ್ನು ಸರ್ದಾರ್ ಪಟೇಲರ ಹೆಗಲಿಗೆ ಹಾಕಿದ್ದರೆ ಸಮಸ್ಯೆ ಬಗೆಹರಿಯಲು ಇಷ್ಟೊಂದು ಸುದೀರ್ಘ ಸಮಯ ಬೇಕಾಗಿರಲಿಲ್ಲ. ಆ. 5 ರಂದು ತೆಗೆದುಕೊಂಡ ಐತಿಹಾಸಿಕ ನಿರ್ಧಾರವನ್ನು ನಾನು ಸರ್ದಾರ್ ಪಟೇಲರಿಗೆ ಅರ್ಪಣೆ ಮಾಡುತ್ತೇನೆ ಎಂದಿದ್ದಾರೆ.
ಭಾರತದ ಪ್ರತಿ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಉದ್ಯೋಗಿಗಳಿಗೆ ಸಿಗುವ ಸೌಲಭ್ಯವನ್ನು ಜಮ್ಮು- ಕಾಶ್ಮೀರಕ್ಕೂ ಒದಗಿಸುತ್ತೇನೆ ಎಂದು ಆಗಸ್ಟ್ನಲ್ಲಿ ಭರವಸೆ ನೀಡಿದ್ದೆ. ಅದರಂತೆ, ಇಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗೆ 7ನೇ ವೇತನಾ ಆಯೋಗದ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ ಎಂದರು.
21ನೇ ಶತಮಾನದಲ್ಲಿ ಭಾರತದ ಏಕತೆ ನಮ್ಮ ಶತ್ರುಗಳ ಮುಂದಿದ್ದ ದೊಡ್ಡ ಸವಾಲಾಗಿತ್ತು, ಆದರೆ ಇಂದು ಸರ್ದಾರ್ ಪಟೇಲ್ ಅವರ ಕಾರಣದಿಂದಾಗಿ ಭಾರತ ಏಕತೆಯ ಸೂತ್ರದಲ್ಲಿ ಬಂಧಿಯಾಗಿದೆ ಎಂದಿದ್ದಾರೆ.
ನಾವು ಎಲ್ಲಾ ಸಮಯದಲ್ಲೂ ನಮ್ಮ ವೈವಿಧ್ಯತೆಯನ್ನು ಸಂಭ್ರಮಿಸಬೇಕು. ನಾವು ಅದರಲ್ಲಿ ಪೂರ್ಣ ಹೃದಯದಿಂದ ಭಾಗವಹಿಸಬೇಕು. ಇದು ಏಕ ಭಾರತ, ಶ್ರೇಷ್ಠ ಭಾರತದ ಕಲ್ಪನೆಯಾಗಿದೆ. ಇದು ರಾಷ್ಟ್ರ ನಿರ್ಮಾಣದ ಶಕ್ತಿಯಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.