ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ದೇಶದ ಆಂತರಿಕ ವಿಷಯ ಎಂಬ ಭಾರತದ ನಿಲುವಿಗೆ ಯುರೋಪಿಯನ್ ಯೂನಿಯನ್ ಸಂಸತ್ ಸದಸ್ಯರ ನಿಯೋಗ ಬುಧವಾರ ಅನುಮೋದನೆಯನ್ನು ನೀಡಿತು. 23 ಯುರೋಪಿಯನ್ ಯೂನಿಯನ್ ಸಂಸತ್ ಸದಸ್ಯರ ತಂಡವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲವನ್ನು ನೀಡುವುದಾಗಿ ಘೋಷಿಸಿತು. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಪಡಿಸಿರುವುದು ದೇಶದ ಆಂತರಿಕ ನಿರ್ಧಾರ ಎಂದು ಘೋಷಿಸಿತು.
ಭಯೋತ್ಪಾದನೆ ಎಂಬುದು ಆಂತರಿಕ ಸಮಸ್ಯೆಯಲ್ಲ ಎಂಬುದನ್ನು ನಿಯೋಗ ಪ್ರತಿಪಾದಿಸಿದೆ. “ಭಯೋತ್ಪಾದನೆ ಭಾರತದ ಸಮಸ್ಯೆ ಮಾತ್ರವಲ್ಲ ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಭಾರತವನ್ನು ಬೆಂಬಲಿಸುತ್ತೇವೆ. ಭಯೋತ್ಪಾದನೆ ಫ್ರಾನ್ಸ್ ಮತ್ತು ಇಡೀ ಯುರೋಪಿನ ಸಮಸ್ಯೆಯಾಗಿದೆ. ಇಡೀ ಜಗತ್ತನ್ನು ಅದು ನಾಶಪಡಿಸಬಲ್ಲದು. ಕಾಶ್ಮೀರವನ್ನು ಮತ್ತೊಂದು ಅಫ್ಘಾನಿಸ್ತಾನವನ್ನಾಗಿಸಲು ನಾವು ಬಯಸುವುದಿಲ್ಲ” ಎಂದಿದ್ದಾರೆ.
ಫ್ರಾನ್ಸ್ನ ಹೆನ್ರಿ ಮಾಲೋಸ್ಸೆ ಮತ್ತು ಥಿಯೆರಿ ಮರಿಯಾನಿ, ಪೋಲೆಂಡ್ನ ರಿಸ್ಜಾರ್ಡ್ ಜಾರ್ನೆಕಿ ಮತ್ತು ಯುಕೆಯ ಬಿಲ್ ನ್ಯೂಟನ್ ಡನ್ ಶ್ರೀನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಹೊಸದಾಗಿ ರೂಪುಗೊಂಡ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತಕ್ಕೆ ಭೇಟಿ ನೀಡಿದ ನಂತರ ಹೇಳಿಕೆ ನೀಡಿರುವ ಈ ನಿಯೋಗ, ಜನರು ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ವಾತಾವರಣವಿದೆ ಎಂದು ಹೇಳಿದ ಅವರು, ಜನರು ಸರ್ಕಾರದಿಂದ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.
“ನಮಗೆ ಭಾರತೀಯ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಸ್ಥಳೀಯ ಜನರನ್ನು ಭೇಟಿ ಮಾಡುವುದು ನಮ್ಮ ಉದ್ದೇಶವಾಗಿತ್ತು. ಇದು ಕಾಶ್ಮೀರದಲ್ಲಿ ನಮಗೆ ಉತ್ತಮ ಅನುಭವವಾಗಿತ್ತು. ಇಲ್ಲಿ ಸರಿಯಾದ ದಿಕ್ಕಿನಲ್ಲಿ ಕೆಲಸ ನಡೆಯುತ್ತಿದೆ. ಕಾಶ್ಮೀರದ ಜನರು ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೆ. ಅವರಿಗೆ ಶಾಲೆ ಮತ್ತು ಆಸ್ಪತ್ರೆಗಳು ಬೇಕು. ಉತ್ತಮ ಪರಿಹಾರವನ್ನು ಕಂಡುಹಿಡಿಯಲು ನಮಗೆ ಭಾರತದ ಬೆಂಬಲ ಬೇಕು “ಎಂದು EU ಸಂಸದರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.