ರಿಯಾದ್: ತಾನು ರಾಜಕೀಯ ಕುಟುಂಬದಿಂದ ಬಂದಿಲ್ಲ, ಆದರೆ ಅತ್ಯಂತ ವಿನಮ್ರ ಹಿನ್ನೆಲೆಯಿಂದ ಬಂದಿದ್ದೇನೆ, ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿದ್ದೇನೆ. ಬಡತನವನ್ನು ಪುಸ್ತಕ ಓದಿ ತಿಳಿದುಕೊಂಡಿಲ್ಲ, ಸ್ವತಃ ಅನುಭವಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸೌದಿಯಲ್ಲಿ ಮಂಗಳವಾರ ಹೇಳಿದ್ದಾರೆ.
“ನನಗೆ ರಾಜಕೀಯ ಕುಟುಂಬದ ಹಿನ್ನಲೆ ಇಲ್ಲ. ನಾನು ಪುಸ್ತಕಗಳಿಂದ ಬಡತನದ ಬಗ್ಗೆ ಕಲಿತಿಲ್ಲ, ಅದನ್ನು ಸ್ವತಃ ಅನುಭವಿಸಿದ್ದೇನೆ. ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುವ ಮೂಲಕ ನಾನು ಇಲ್ಲಿಯವರೆಗೆ ತಲುಪಿದ್ದೇನೆ” ಎಂದು ಪ್ರಧಾನಿ ಮೋದಿಭವಿಷ್ಯದ ಹೂಡಿಕೆ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ವೇಳೆ ಹೇಳಿದ್ದಾರೆ.
“ಕೆಲವೇ ವರ್ಷಗಳಲ್ಲಿ, ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಭಾರತ ಯಶಸ್ವಿಯಾಗಲಿದೆ. ಬಡವರ ಸಬಲೀಕರಣದ ಮೂಲಕ ಬಡತನದ ವಿರುದ್ಧದ ನನ್ನ ಹೋರಾಟ ಮುಂದುವರೆಯಲಿದೆ. ಬಡವರಿಗೆ ಘನತೆ ಬೇಕು. ಬಡವ ತಾನು ತನ್ನ ಬಡತನವನ್ನು ಕೊನೆಗೊಳಿಸುವುದಾಗಿ ಹೇಳಿದ ದಿನ ನನಗೆ ಸಂತೃಪ್ತಿಯಾಗುತ್ತದೆ. ಬಡವರಿಗೆ ಗೌರವವನ್ನು ನೀಡುವುದು ಮತ್ತು ಅವರಿಗೆ ಅಧಿಕಾರ ನೀಡುವುದು ನಮ್ಮ ಉದ್ದೇಶ “ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶೌಚಾಲಯಗಳನ್ನು ನಿರ್ಮಿಸಿರುವುದರಿಂದ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದಿರುವುದರಿಂದ ಭಾರತದಲ್ಲಿ ಬಡವರಿಗೆ ಅಧಿಕಾರ ಸಿಕ್ಕಿದೆ ಮತ್ತು ಅವರಿಗೆ ಘನತೆಯ ಭಾವವನ್ನು ನೀಡಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಬದಲಾವಣೆ ಬಂದಾಗ ಇಡೀ ಪ್ರಪಂಚದ ಅಂಕಿ ಅಂಶಗಳು ಬದಲಾಗುತ್ತವೆ ಎಂದು ಪ್ರಧಾನಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.