ನವದೆಹಲಿ: ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವು ಗುರು ನಾನಕ್ ಅವರ 550 ನೇ ಗುರುಪುರಬ್ ಹಿನ್ನೆಲೆಯಲ್ಲಿ ತನ್ನ ಬೋಯಿಂಗ್ 787 ಡ್ರೀಮ್ಲೈನರ್ ಏರ್ಕ್ರಾಫ್ಟ್ ಬಾಲದಲ್ಲಿ ‘ಏಕ್ ಓಂಕಾರ್’ ಎಂದು ಬರೆದಿದೆ.
ಅಮೃತಸರದಿಂದ ಲಂಡನ್ಗೆ ನೇರ ವಿಮಾನವನ್ನು ಹಾರಿಸುವ ಬೇಡಿಕೆ ಸುದೀರ್ಘ ಸಮಯದಿಂದ ಕೇಳಿಬಂದಿತ್ತು, ಈ ಹಿನ್ನೆಲೆಯಲ್ಲಿ ಗುರುನಾನಕ್ ದೇವ್ ಅವರ 550 ನೇ ಜನ್ಮದಿನದ ಸಂದರ್ಭದಲ್ಲಿ ವಿಮಾನವನ್ನು ಹಾರಿಸಲು ಸುವರ್ಣ ಅವಕಾಶವಾಗಿದೆ ಮುಖ್ಯಸ್ಥ ಅಶ್ವನಿ ಲೋಹಾನಿ ಹೇಳಿದ್ದಾರೆ.
“ವಿಮಾನದ ಹೊರಭಾಗವನ್ನು ವಿಶಿಷ್ಟವಾಗಿಡಲು ನಾವು ಬಯಸಿದ್ದೆವು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯಕವಾಗಲಿದೆ. 550ನೇ ಗುರುಪುರಬ್ ಅನ್ನು ಆಚರಿಸುವ ಸಲುವಾಗಿ ನಾವು ವಿಮಾನದ ಬಾಲದಲ್ಲಿ ‘ಏಕ್ ಓಂಕಾರ್’ ಎಂದು ಬರೆದಿದ್ದೇವೆ. ಇದರರ್ಥ ದೇವರೊಬ್ಬನೇ ಎಂಬುದಾಗಿದೆ.
“ಅಕ್ಟೋಬರ್ 31 ರಂದು ಅಮೃತಸರದಿಂದ ಯುಕೆಗೆ ನೇರವಾಗಿ ವಿಮಾನಯಾನವನ್ನು ಪ್ರಾರಂಭಿಸುತ್ತಿದ್ದೇವೆ. ಪ್ರಯಾಣಿಕರಿಂದ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸೋಮವಾರ, ಗುರುವಾರ ಮತ್ತು ಶನಿವಾರದಂದು ವಿಮಾನಯಾನ ಸೇವೆ ಇರಲಿದೆ. ಲಂಡನ್ನಲ್ಲಿರುವ ಸಿಖ್ ಯಾತ್ರಾರ್ಥಿಗಳಿಗೆ ಅಮೃತಸರಕ್ಕೆ ಭೇಟಿ ನೀಡಲು ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ. 256 ಆಸನಗಳುಳ್ಳ ಈ ವಿಮಾನದಲ್ಲಿ ಪಂಜಾಬಿನ ಸ್ವಾದಿಷ್ಠ ತಿನಿಸುಗಳನ್ನು ನೀಡಲಿದೆ” ಎಂದಿದ್ದಾರೆ.
ವಿಮಾನಯಾನ ಸೇವಾ ವಲಯವಾಗಿರುವುದರಿಂದ ಇಲ್ಲಿ ಸೃಜನಶೀಲತೆಯು ಅತ್ಯವಶ್ಯಕವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.