ಇಸ್ಲಾಮಾಬಾದ್: 72 ವರ್ಷಗಳ ಬಳಿಕ ಪಾಕಿಸ್ಥಾನದಲ್ಲಿ ತೆರೆಯಲಾದ ಶಿವ ದೇಗುಲದಲ್ಲಿ ಈ ವರ್ಷ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗಿದೆ.
ಪಾಕಿಸ್ಥಾನದ ಸಿಯಲ್ಕೊಟ್ನಲ್ಲಿರುವ ಶವಲ ತೇಜ ಸಿಂಗ್ ದೇಗುಲ 1947 ರಿಂದ ಮುಚ್ಚಲ್ಪಟ್ಟಿತು. ಇದೀಗ ಅದನ್ನು ಪುನರುಜ್ಜೀವನಗೊಳಿಸಿ ಪುನರ್ ತೆರೆಯಲಾಗಿದೆ. ಈ ವರ್ಷ ಆ ದೇಗುಲದಲ್ಲಿ ದೀಪಾವಳಿಯನ್ನು ಆಚರಣೆ ಮಾಡಲಾಗಿದೆ.
ಪಾಕಿಸ್ಥಾನದ ರೂ. 5 ಮಿಲಿಯನ್ ವೆಚ್ಚದಲ್ಲಿ ದೇಗುಲವನ್ನು ಪುನರುಜ್ಜೀವನಗೊಳಿಸಲಾಗಿದೆ. ಕಳೆದ ಫೆಬ್ರವರಿ 25ರಂದು ಅಲ್ಲಿನ ETBP(Evacuee Trust Properties Board) ಮುಖ್ಯಸ್ಥ ಅಮೀರ್ ಅಹಮದ್ ಇದನ್ನು ಉದ್ಘಾಟನೆಗೊಳಿಸಿದರು.
ಈ ದೇಗುಲವನ್ನು ಪುನರ್ ತೆರೆಯುವಂತೆ ಇಲ್ಲಿನ ಹಿಂದುಗಳು ಸುಧೀರ್ಘ ವರ್ಷಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು EPTB ಸಂಸ್ಥೆಗೆ ದೇಗುಲವನ್ನು ತೆರೆಯುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದ್ದರು. ಹೀಗಾಗಿ ಜುಲೈ ತಿಂಗಳಲ್ಲಿ ದೇಗುಲವನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.