ಬಾಕು: ಅಜೆರ್ಬೈಜಾನ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಅಲಿಪ್ತ ಚಳುವಳಿ(Non-Aligned Movement (NAM)) 18ನೇ ಅಧಿವೇಶನದ ಸೈಡ್ಲೈನಿನಲ್ಲಿ ಕೀನ್ಯಾದ ಉಪ ವಿದೇಶಾಂಗ ಸಚಿವ ಅಬಾಬು ನಮ್ವಾಂಬಾ ಅವರನ್ನು ಭೇಟಿಯಾದರು. ಈ ವೇಳೆ ನೈರೋಬಿಯೊಂದಿಗಿನ ಭಾರತದ ಸಹಕಾರದ ಬಗ್ಗೆ ಚರ್ಚಿಸಿದರು.
ಈ ಬಗ್ಗೆ ಟ್ವಿಟ್ ಮಾಡಿರುವ ಜೈಶಂಕರ್ ಅವರು, ” ಅಭಿವೃದ್ಧಿ ಸಹಕಾರ ಮತ್ತು ಆಫ್ರಿಕನ್ ಪಾಲುದಾರಿಕೆ ಕುರಿತು ಕೀನ್ಯಾದ ಉಪ ವಿದೇಶಾಂಗ ಸಚಿವ ಅಬಾಬು ನಮ್ವಾಂಬಾ ಅವರೊಂದಿಗೆ ಉತ್ತಮ ಮಾತುಕತೆ ನಡೆಯಿತು” ಎಂದಿದ್ದಾರೆ.
ಶ್ರೀಲಂಕಾದ ವಿದೇಶಾಂಗ ಸಚಿವ ತಿಲಕ್ ಮರಪನಾ ಅವರೊಂದಿಗೆ ಕೂಡ ಮಾತುಕತೆ ನಡೆಸಿದ ಜೈಶಂಕರ್ ಅವರು, NAM ಸಮಿತ್ ಬಗ್ಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು.
ಇದಕ್ಕೂ ಮೊದಲು, ಜೈಶಂಕರ್ ಅವರು ಮಲೇಷ್ಯಾದ ವಿದೇಶಾಂಗ ಸಚಿವ ಸೈಫುದ್ದೀನ್ ಅಬ್ದುಲ್ಲಾ ಅವರನ್ನು ಬುಧವಾರ ಬಾಕುನಲ್ಲಿ ನಡೆದ NAM ಮಂತ್ರಿ ಸಭೆಯಲ್ಲಿ ಭೇಟಿಯಾದರು.
ಭಾರತವು NAMನ ಸ್ಥಾಪಕ ಸದಸ್ಯನಾಗಿದ್ದು, ಇದು ವಿಶ್ವ ನಾಯಕರ ಅತಿದೊಡ್ಡ ಕೂಟಗಳಲ್ಲಿ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.