ಕಲ್ಬುರ್ಗಿ: ದೇಹಕ್ಕೆ ಶ್ರಮವನ್ನು ನೀಡುವ ಕೆಲಸವನ್ನು ಕಂಡರೆ ಇಂದಿನ ಯುವ ಜನತೆ ಮಾರುದೂರ ಓಡುತ್ತಾರೆ. ಇಂತಹ ಸಂದರ್ಭದಲ್ಲಿ ಕಲ್ಬುರ್ಗಿಯ 91 ವರ್ಷದ ರೈತರೊಬ್ಬರು ದಿನಕ್ಕೆ 8 ಗಂಟೆಗಳ ಕಾಲ ಹೊಲದಲ್ಲಿ ಬೆವರು ಸುರಿಸಿ ದುಡಿಯುತ್ತಾರೆ.
ಬಸವನಪ್ಪ ಪಾಟೀಲ್ ಈ ಇಳಿ ವಯಸ್ಸಿನಲ್ಲೂ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹೊಲದಲ್ಲಿ ದುಡಿತ್ತಾರೆ, ಎತ್ತುಗಳ ಮೂಲಕ ಹೊಲವನ್ನು ಉಳುಮೆ ಮಾಡುವುದರಿಂದ ಹಿಡಿದು ಎಲ್ಲಾ ಕೆಲಸವನ್ನೂ ಮಾಡುತ್ತಾರೆ.
ನಿತ್ಯ ರೊಟ್ಟಿ, ಮೊಸರು ಮತ್ತು ಹಾಲನ್ನು ಕುಡಿಯುವ ಇವರು, ಒಂದು ದಿನವೂ ಅನಾರೋಗ್ಯ ಪೀಡಿತರಾಗಿ ಮಲಗಿಲ್ಲ.
ಇವರಿಗೆ ಆರು ಮಂದಿ ಮಕ್ಕಳಿದ್ದಾರೆ. ಆದರೆ ಯಾರೊಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡಿಲ್ಲ. ಈ ಬಗ್ಗೆ ಬಸವನಪ್ಪ ಅವರಿಗೆ ಬೇಸರವಿದೆ.
ಯುವಜನತೆಗೆ ಏನು ಸಂದೇಶ ನೀಡುತ್ತೀರಾ ಎಂದು ಅವರನ್ನು ಕೇಳಿದರೆ, “ನಾನೇನೂ ಸಂದೇಶವನ್ನು ನೀಡುವುದಿಲ್ಲ, ಯಾಕೆಂದರೆ ಹಿರಿಯರ ಯಾವ ಸಂದೇಶವನ್ನೂ ಇಂದಿನ ಯುವ ಜನತೆ ಕೇಳುವುದಿಲ್ಲ” ಎಂದಿದ್ದಾರೆ.
91ರ ವಯಸ್ಸಿನಲ್ಲಿ ಚಿರ ಯುವಕನಂತೆ ಹೊಲದಲ್ಲಿ ಬೆವರು ಸುರಿಸಿ ಕೆಲಸ ಮಾಡುವ ಬಸವನಪ್ಪ ಅವರ ದುಡಿಮೆಯ ವೈಖರಿ ಎಲ್ಲರಿಗೂ ಪ್ರೇರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.