ಮೈಸೂರು: ತನ್ನ ವೃದ್ಧ ತಾಯಿಯನ್ನು ಹಳೆ ಸ್ಕೂಟರಿನಲ್ಲಿ ಕುಳ್ಳರಿಸಿಕೊಂಡು ದೇಶದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ನಡೆಸುತ್ತಿರುವ ಮೈಸೂರಿನ ನಿವಾಸಿಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.
ಕೃಷ್ಣ ಕುಮಾರ್ ಹಾಗೂ ಅವರ ತಾಯಿ ರತ್ನಮ್ಮ ಅವರ ತೀರ್ಥಯಾತ್ರೆಯ ಕಥೆಯನ್ನು ಕೇಳಿದ ಆನಂದ್ ಮಹೀಂದ್ರಾ ಅವರು, ಅಮ್ಮ-ಮಗನಿಗೆ ಕೆಯುವಿ 100 ಎನ್ಎಕ್ಸ್ಟಿ ಕಾರನ್ನು ಗಿಫ್ಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಅಮ್ಮ ಮಗನ ಯಾತ್ರೆಯ ಬಗ್ಗೆ ಟ್ವಿಟ್ ಮಾಡಿದ ಮನೋಜ್ ಅವರಿಗೆ ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿದ ಮಹೀಂದ್ರಾ ಅವರು, “ಇದೊಂದು ಸುಂದರವಾದ ಕಥೆ. ತಾಯಿಗಾಗಿನ ಪ್ರೀತಿ ಮಾತ್ರವಲ್ಲ, ದೇಶದ ಬಗೆಗಿನ ಪ್ರೀತಿಯನ್ನೂ ಇದು ಒಳಗೊಂಡಿದೆ. ಈ ಕಥೆಯನ್ನು ಹಂಚಿಕೊಂಡ ಮನೋಜ್ ಅವರಿಗೆ ಧನ್ಯವಾದಗಳು. ನೀವು ನನ್ನನ್ನು ಅವರಿಗೆ ಸಂಪರ್ಕಿಸಿದರೆ, ನಾನು ಮಹೀಂದ್ರ ಕೆಯುವಿ 100 ಎನ್ ಎಕ್ಸ್ ಟಿ ಕಾರ್ ಅನ್ನು ಅವರಿಗೆ ಉಡುಗೊರೆ ನೀಡಲು ಬಯಸುವೆ. ಇದರಿಂದ ಅವರು ಕಾರಿನ ಮೂಲಕವೇ ತಮ್ಮ ತಾಯಿಯನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬಹುದು” ಎಂದಿದ್ದಾರೆ.
A beautiful story. About the love for a mother but also about the love for a country… Thank you for sharing this Manoj. If you can connect him to me, I’d like to personally gift him a Mahindra KUV 100 NXT so he can drive his mother in a car on their next journey https://t.co/Pyud2iMUGY
— anand mahindra (@anandmahindra) October 23, 2019
ಮೂಲತಃ ಮೈಸೂರಿನವರಾಗಿರುವ ಕೃಷ್ಣ ಕುಮಾರ್ ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ಇವರ ತಾಯಿ ರತ್ನಮ್ಮ ಅವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ತಮ್ಮ ತಾಯಿಯನ್ನು ತಮ್ಮ ಹಳೆಯ ಸ್ಕೂಟರ್ ಮೂಲಕವೇ ಕರೆದುಕೊಂಡು ಹೋಗಲು ಪ್ರಾರಂಭಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.