ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಈ ವೇಳೆ ಮಾತನಾಡಿದ ಅವರು, ” ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ವೃತ್ತಿಯನ್ನು ತ್ಯಾಗ ಮಾಡಿದ್ದಾರೆ. ನಾವು ನಿಮ್ಮ ಬಳಿ ಅಂತಹ ಮಹಾನ್ ತ್ಯಾಗವನ್ನು ಕೇಳುತ್ತಿಲ್ಲ ಬದಲಾಗಿ ನಿಮ್ಮ ಆದಾಯದ ಒಂದು ಭಾಗವನ್ನು ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ತ್ಯಾಗಮಾಡಿ ಎಂದು ಮನವಿ ಮಾಡುತ್ತಿದ್ದೇನೆ. ಪ್ರಮಾಣಿಕವಾದ ರೀತಿಯಲ್ಲಿ ತೆರಿಗೆಯನ್ನು ಪಾವತಿಸಿ” ಎಂದರು.
ತೆರಿಗೆ ಪಾವತಿಸುವುದು ಶಿಕ್ಷೆಯಲ್ಲ, ನಾವು ಗಳಿಸಿದ ಆದಾಯದ ಒಂದು ಭಾಗವನ್ನು ದೇಶದ ಒಳಿತಿಗಾಗಿ ನೀಡುವುದು. ತೆರಿಗೆ ಪಾವತಿಯಿಂದಾಗುವ ಪ್ರಯೋಜನಗಳ ಬಗ್ಗೆ ಅರಿವನ್ನು ಹೊಂದಿರುವುದು ಮತ್ತು ತೆರಿಗೆ ಪಾವತಿಯನ್ನು ಖಚಿತಪಡಿಸುವುದು ಪ್ರತಿಯೊಬ್ಬ ತೆರಿಗೆದಾರನ ಜವಾಬ್ದಾರಿ” ಎಂದರು.
“ಜಿಎಸ್ಟಿಯು ಬಹು ಮಾದರಿ ತೆರಿಗೆಗೆ ಮತ್ತು ಗ್ರಾಹಕರ ಮೇಲೆ ತೆರಿಗೆ ಹೇರಿಕೆಗೂ ಅಂತ್ಯ ಹಾಡಿದೆ. ಜಿಎಸ್ಟಿ ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ತೆರಿಗೆ ಹಣವನ್ನು ಬಡವರಿಗೆ, ವಿದ್ಯುತ್, ರಸ್ತೆ, ಗ್ಯಾಸ್ ಮುಂತಾದುವುಗಳಿಗೆ, ಬಾಹ್ಯಾಕಾಶ ಯೋಜನೆಗೆ, ರೈತರ ಸಹಾಯಕ್ಕೆ ಮಾತ್ರವಲ್ಲದೇ, ಹವಮಾನ ವೈಪರೀತ್ಯದ ಬಗ್ಗೆ ಹೋರಾಡಲು ಕೂಡಾ ಬಳಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ತೆರಿಗೆದಾರರನ್ನು ಹೊಂದಿದರೆ ತೆರಿಗೆ ಮೊತ್ತವನ್ನು ನಾವು ಇಳಿಕೆ ಮಾಡಬಹುದಾಗಿದೆ. ಸಣ್ಣ ತೆರಿಗೆದಾರರಿಂದ ಕೂಡ ಸಹಾಯವಾಗುತ್ತದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.