ಹೈಲಕಂಡಿ: ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ರಾಷ್ಟ್ರವು ಸಮರ ಸಾರಿರುವ ಸಂದರ್ಭದಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯವನ್ನು ಹುಡುಕುವ ಕಾರ್ಯಗಳು ಸಕ್ರಿಯವಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ದಕ್ಷಿಣ ಅಸ್ಸಾಂನ ಹೈಲಕಂಡಿ ಜಿಲ್ಲೆಯ 646 ನಂ ಖಾದಿಂಬಾರಿ ಎಲ್ಪಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ಬಾಳೆಹಣ್ಣಿನ ಸಿಪ್ಪೆಗಳಿಂದ ಬಯೋಪ್ಲಾಸ್ಟಿಕ್ ಚೀಲವನ್ನು ತಯಾರಿಸಿದ್ದಾರೆ.
ಎಸ್ಎಸ್ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ (ಎನ್ಸಿಎಸ್ಸಿ) ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ 65 ವಿಜ್ಞಾನ ಪ್ರಾಜೆಕ್ಟ್ಗಳಲ್ಲಿ ಈ ಇಬ್ಬರ ವಿದ್ಯಾರ್ಥಿಗಳ ಬಾಳೆಹಣ್ಣಿನ ಸಿಪ್ಪೆ ಬ್ಯಾಗ್ ಪ್ರಥಮ ಸ್ಥಾನ ಗಳಿಸಿದೆ.
“646 ನಂ ಖಾದಿಂಬಾರಿ ಎಲ್ಪಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಗಳಾದ ಫಾಹಿಯಾ ಮತ್ತು ಇಂಜಮೂರ್ ಅವರು ತಯಾರಿಸಿದ ಪರಿಸರ ಸ್ನೇಹಿ ಚೀಲ ಎಲ್ಲರ ಗಮನ ಸೆಳೆಯಿತು. ಜೈವಿಕವಾಗಿ ಕರಗಬಲ್ಲ ಪರಿಸರ ಸ್ನೇಹಿ ಚೀಲವು ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ಚೀಲಕ್ಕೆ ಅತ್ಯುತ್ತಮ ಪರ್ಯಾಯವಾಗಿದೆ. ತ್ಯಾಜ್ಯದಿಂದ ಆರೋಗ್ಯ ಎಂಬ ಥೀಮ್ ಅನ್ನು ಇಟ್ಟುಕೊಂಡು ಬಾಳೆಹಣ್ಣಿನ ಸಿಪ್ಪೆಯಿಂದ ಚೀಲವನ್ನು ಈ ವಿದ್ಯಾರ್ಥಿಗಳು ತಯಾರಿಸಿದ್ದಾರೆ” ಎಂದು ಶಿಕ್ಷಣ ಅಧಿಕಾರಿ ರಾಜೀವ್ ಕುಮಾರ್ ಜಾ ಹೇಳಿದ್ದಾರೆ.
ಈ ವರ್ಷ ನವೆಂಬರ್ 1 ರಿಂದ 4 ರವರೆಗೆ ಅಸ್ಸಾಂನ ಟಿನ್ಸುಕಿಯಾದಲ್ಲಿ ನಡೆಯಲಿರುವ 27 ನೇ ರಾಜ್ಯ ಮಟ್ಟದ ‘ಎನ್ಸಿಎಸ್ಸಿ 2019’ ರಲ್ಲಿ ಜಿಲ್ಲಾ ಮಟ್ಟದಲ್ಲಿ ವಿವಿಧ ಉಪ-ವಿಷಯಗಳ ಅಡಿಯಲ್ಲಿ ಆಯ್ಕೆ ಮಾಡಲಾದ 10 ಶಾಲಾ ಯೋಜನೆಗಳು ಹೈಲಕಂಡಿ ಜಿಲ್ಲೆಯನ್ನು ಪ್ರತಿನಿಧಿಸುತ್ತವೆ ಎಂದುಜಾ ತಿಳಿಸಿದ್ದಾರೆ.
ಸ್ಪ್ರಿಂಗ್ ವ್ಯಾಲಿ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿ ರಫತ್ ತನ್ವೀರ್ ಬರ್ಬುಯ ಅಕ್ಕಿ ಸ್ಟ್ರಾಚ್ನಿಂದ ತಯಾರಿಸಿದ ಬಯೋಪ್ಲಾಸ್ಟಿಕ್, ಟೆಕ್ಸ್ ಟೈಲ್ ಕೈಗಾರಿಕೆಗಳಿಗಾಗಿ ಬಾಳೆಹಣ್ಣಿನ ಪರ್ಯಾಯವೊಂದನ್ನು ಕಂಡುಹಿಡಿದ ಪ್ರಾಣಕೃಷ್ಣ ಗರ್ಲ್ಸ್ ಹೈಯರ್ ಸೆಕಂಡರಿ ಸ್ಕೂಲ್ ವಿದ್ಯಾರ್ಥಿನಿ ರಿಮಶ್ರೀಯ ಪ್ರಾಜೆಕ್ಟ್ ಭಾರೀ ಮನ್ನಣೆ ಗಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.