ಬೀಜಿಂಗ್: ಮಹಾತ್ಮ ಗಾಂಧಿ ಕೇವಲ ಭಾರತೀಯರನ್ನು ಮಾತ್ರ ಪ್ರೇರೇಪಿಸಲಿಲ್ಲ, ಇಡೀ ವಿಶ್ವಕ್ಕೆಯೇ ಅತ್ಯಮೂಲ್ಯ ಆಧ್ಯಾತ್ಮಿಕ ಪರಂಪರೆಯನ್ನು ಕೊಟ್ಟು ಹೋಗಿದ್ದಾರೆ ಎಂದು ಚೀನಾ ಹೇಳಿದೆ. “ಭಾರತ ಮತ್ತು ಚೀನಾವು ಸಮಾನ ದುಃಖ ಮತ್ತು ಸಂಕಷ್ಟಗಳನ್ನು ಹಂಚಿಕೊಳ್ಳುತ್ತಿರುವ ಸಹ ಪ್ರಯಾಣಿಕರು” ಎಂಬ ಗಾಂಧೀಜಿಯವರ ಮಾತನ್ನು ಅದು ಸ್ಮರಿಸಿಕೊಂಡಿದೆ.
ಚೀನಾದ ಪ್ರಸಿದ್ಧ ಶಿಲ್ಪಿ ಮತ್ತು ಕಲಾವಿದ ಯುವಾನ್ ಕ್ಸಿಕುನ್ ಅವರು ಕೆತ್ತಿದ ಮಹಾತ್ಮ ಗಾಂಧಿಯ ಪ್ರತಿಮೆಯನ್ನು 2005 ರಲ್ಲಿ ಪ್ರಸಿದ್ಧ ಚಾಯಾಂಗ್ ಉದ್ಯಾನವನದಲ್ಲಿ ಸ್ಥಾಪಿಸಿದಾಗಿನಿಂದ ಅಕ್ಟೋಬರ್ 2 ಬೀಜಿಂಗ್ಗೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಇದು ಕಮ್ಯುನಿಸ್ಟ್ ರಾಷ್ಟ್ರದ ಗಾಂಧಿ ಅಭಿಮಾನಿಗಳಿಗೆ ಗೌರವ ಸಲ್ಲಿಸಲು ಅವಕಾಶವನ್ನು ಒದಗಿಸಿಕೊಟ್ಟಿದೆ.
ಪ್ರತಿ ವರ್ಷ ಗಾಂಧಿ ಜಯಂತಿಯಂದು ಸುಂದರವಾದ ಚಾಯಾಂಗ್ ಉದ್ಯಾನವನವು ಮಹಾತ್ಮ ಗಾಂಧಿಯ ಭಜನೆಗಳ ಪಠಣ ಮತ್ತು ಅವರ ಪ್ರಸಿದ್ಧ ನುಡಿಮುತ್ತುಗಳನ್ನು ಅನುರಣಿಸುತ್ತದೆ.
“ಭಾರತೀಯ ಸ್ವಾತಂತ್ರ್ಯ ಚಳವಳಿಯ ನಾಯಕ ಮತ್ತು ಪ್ರವರ್ತಕನಾಗಿ ಮಹಾತ್ಮ ಗಾಂಧಿ ಭಾರತದ ಸ್ವಾತಂತ್ರ್ಯಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ” ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಮಹಾತ್ಮ ಎಂದು ಕರೆಯಲ್ಪಡುವ ಚೇತನ ಮತ್ತು ಅವರ ಕಾರ್ಯಗಳು ಭಾರತದ ಜನರಿಗೆ ಸ್ಫೂರ್ತಿ ನೀಡಿರುವುದು ಮಾತ್ರವಲ್ಲದೇ, ಅಮೂಲ್ಯವಾದ ಆಧ್ಯಾತ್ಮಿಕ ಪರಂಪರೆಯನ್ನು ಜಗತ್ತಿಗೆ ಕೊಟ್ಟಿದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.
“ಚೀನಾ ಮತ್ತು ಭಾರತವು ದುಃಖ ಮತ್ತು ಸಂಕಟಗಳನ್ನು ಹಂಚಿಕೊಳ್ಳುವ ಸಹ ಪ್ರಯಾಣಿಕರು” ಎಂಬ ಮಹಾತ್ಮ ಗಾಂಧಿಯವರ ಮಾತನ್ನು ನೆನಪಿಸಿಕೊಂಡ ಗೆಂಗ್, ಚೀನಾವು ಭಾರತದೊಂದಿಗೆ ಪರಸ್ಪರ ರಾಜಕೀಯ ನಂಬಿಕೆ ಮತ್ತು ಸಹಕಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದೆ ಎಂದು ಹೇಳಿದ್ದಾರೆ.
“ಪ್ರಸ್ತುತ, ಚೀನಾ ಮತ್ತು ಭಾರತ ಎರಡೂ ರಾಷ್ಟ್ರೀಯ ಅಭಿವೃದ್ಧಿಯ ಪ್ರಮುಖ ಹಂತದಲ್ಲಿದೆ. ಪರಸ್ಪರ ರಾಜಕೀಯ ನಂಬಿಕೆಯನ್ನು ಹೆಚ್ಚಿಸಲು, ಪ್ರಾಯೋಗಿಕ ಸಹಕಾರವನ್ನು ವಿಸ್ತರಿಸಲು ಮತ್ತು ಜಂಟಿಯಾಗಿ ರಾಷ್ಟ್ರೀಯ ನವ ಯುಗವನ್ನು ಪಡೆಯಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ” ಎಂದು ಗೆಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.