ಮಂಗಳೂರು : ಮಂಗಳೂರಿನ ಪ್ರದೀಪ್ ಕುಮಾರ್ ಅವರು ಕೆನಡಾದ ಸೇಂಟ್ ಜೋನ್ಸ್ನಲ್ಲಿ ಜರುಗಿದ ಕಾಮನ್ವೆಲ್ತ್ ಬೆಂಚ್ಪ್ರೆಸ್ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ 83 ಕೆಜಿ ವಿಭಾಗದಲ್ಲಿ ಬಂಗಾರದ ಪದಕವನ್ನು ಜಯಿಸಿ ತಾಯ್ನಾಡಿಗೆ ಕೀರ್ತಿಯನ್ನು ತಂದಿದ್ದಾರೆ.
ಪ್ರದೀಪ್ ಕುಮಾರ್ ಅವರು ಈ ಸ್ಪರ್ಧೆಯಲ್ಲಿ ಒಟ್ಟು 210 ಕೆಜಿ ಭಾರವನ್ನು ಎತ್ತಿದ್ದಾರೆ. ಮೊದಲ ಪ್ರಯತ್ನದಲ್ಲಿ ಅವರು ಈ ಸಾಧನೆಯನ್ನು ಮಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಕೆನಡಾದ ಟಾಮ್ ಕೀನ್ ಅವರು 180 ಕೆಜಿ ಭಾರವನ್ನು ಎತ್ತಿ ಬೆಳ್ಳಿ ಪದಕ ಗೆದ್ದರು ಮತ್ತು 175 ಕೆಜಿ ಭಾರ ಎತ್ತಿದ ರಾಬ್ ಡೈಕ್ ಕಂಚು ಗೆದ್ದರು.
ಪ್ರದೀಪ್ ಕುಮಾರ್ ಅವರು ಬುಧವಾರ ಮತ್ತೊಂದು ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಪ್ರದೀಪ್ ಅವರಿಗೆ ಬಾಲಾಂಜನೇಯ ಜಿಮ್ನ ಸತೀಶ್ ಕುಮಾರ್ ತರಬೇತಿಯನ್ನು ನೀಡಿದ್ದಾರೆ.
ಪ್ರದೀಪ್ ಅವರ ಸಾಧನೆಯೊಂದಿಗೆ ಭಾರತವು ಈ ಕ್ರೀಡಾಕೂಟದಲ್ಲಿ ಒಟ್ಟು ಮೂರು ಪದಕಗಳನ್ನು ಗೆದ್ದುಕೊಂಡಿದೆ. ಸೋಮವಾರ ತಮಿಳುನಾಡಿನ ಇಬ್ಬರು ಈ ಸ್ಪರ್ಧೆಯಲ್ಲಿ ಬಂಗಾರ ಜಯಿಸಿದ್ದರು.
ಈ ಕ್ರೀಡಾಕೂಟದಲ್ಲಿ ಕರ್ನಾಟಕದ 18 ಮಂದಿ ಭಾಗವಹಿಸಬೇಕಿತ್ತು, ಆದರೆ ವೀಸಾ ಸಮಸ್ಯೆಯಿಂದಾಗಿ 15 ಮಂದಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ದೇಶದಿಂದ 60 ಮಂದಿ ಭಾಗವಹಿಸಬೇಕಿತ್ತು, ಆದರೆ ವೀಸಾ ಸಮಸ್ಯೆಯಿಂದಾಗಿ 30 ಮಂದಿಗೆ ಅವಕಾಶ ತಪ್ಪಿ ಹೋಗಿದೆ.
ವೀಸಾ ವಂಚಿತರಿಗೆ ನಾನು ನನ್ನ ಜಯವನ್ನು ಅರ್ಪಿಸುವುದಾಗಿ ಪ್ರದೀಪ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.