ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಅತ್ಯಂತ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ತಮ್ಮ ಕಾರ್ಯಕ್ಕೆ ಯಶಸ್ಸನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ವಿಭಿನ್ನ ಪ್ರತಿಭಟನೆಯ ಫಲವಾಗಿ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ.
ಚಂದ್ರನ ಮೇಲೆ ವ್ಯಕ್ತಿ ನಡೆದಾಡುವ ಮಾದರಿಯಲ್ಲಿ ರಸ್ತೆಗುಂಡಿಗಳ ಮೇಲೆ ಚಂದ್ರಯಾನ ಧಿರಿಸನ್ನು ತೊಟ್ಟ ವ್ಯಕ್ತಿ ನಡೆದಾಡಿದ ವೀಡಿಯೋ ಚಿತ್ರೀಕರಣ ಮಾಡಲಾಗಿತ್ತು. ಈ ದೃಶ್ಯ ವ್ಯಕ್ತಿ ಚಂದ್ರನ ಮೇಲೆ ನಡೆದಾಡುತ್ತಿರುವಂತೆಯೇ ಮೂಡಿಬಂದಿತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಟ್ವಿಟರ್, ಫೇಸ್ ಬುಕ್ ಎಲ್ಲಾ ಕಡೆಯೂ ಜನರು ಇದನ್ನು ಹಂಚಿಕೊಂಡಿದ್ದರು. ಸುದ್ದಿ ಮಾಧ್ಯಮಗಳೂ ಇದನ್ನು ಸುದ್ದಿ ಮಾಡಿದ್ದವು.
ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ.
“ಆರ್.ಆರ್.ನಗರದ ನಮ್ಮ ಮುಖ್ಯ ಎಂಜಿನಿಯರ್ ಎಸ್.ಪ್ರಭಾಕರ್ ಅವರ ಮೇಲ್ವಿಚಾರಣೆಯಲ್ಲಿ, ವಾಯುವ್ಯ ಉಪನಗರದ ತುಂಗನಗರ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮಣ್ಣು, ಬಿಟುಮೆನ್ ಮತ್ತು ಆಸ್ಫಾಲ್ಟೆಡ್ಗಳಿಂದ ಬುಧವಾರ ಮಧ್ಯಾಹ್ನದ ಹೊತ್ತಿಗೆ ಮುಚ್ಚಲಾಗಿದೆ. ಕಲಾವಿದರ ದೂರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಕ್ತವಾದ ಪ್ರತಿಕ್ರಿಯೆಗೆ ನಾವು ತಕ್ಷಣವೇ ಸ್ಪಂದಿಸಿದ್ದೇವೆ” ಎಂದು ಬಿಬಿಎಂಪಿ ವಕ್ತಾರ ಎಲ್.ಬಿ.ಸುರೇಶ್ ಹೇಳಿದ್ದಾರೆ.
ಬಾದಲ್ ನಂಜುಂಡ ಸ್ವಾಮಿ ಅವರು ಈ ಹಿಂದೆಯೂ ರಸ್ತೆ ಗುಂಡಿಗಳ ಮೇಲೆ ಮೊಸಳೆ, ಜಲ ಕನ್ಯೆಯ ಪ್ರತಿರೂಪಗಳನ್ನು ಇಟ್ಟು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು.
Hello👋 BBMP Commissioner #thelatest #nammabengaluru #streetart #potholes #herohalli
Baadal Nanjundaswamy ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಸೆಪ್ಟೆಂಬರ್ 1, 2019
Thank you people for such a overwhelming response and support!
Work in progress.. Quick and prompt response from @BBMP. Thank you very much @BBMPCOMM @BBMP_MAYOR and Mr. Prabhakar, CE RR Nagar who is overlooking on ground currently. pic.twitter.com/7jGnlZIA2l
— baadal nanjundaswamy (@baadalvirus) September 3, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.