ಬೆಂಗಳೂರು: ಭಾರತದ ಇತರ ರಾಜ್ಯಗಳ ಹೆಜ್ಜೆ ಗುರುತನ್ನು ಬೆಂಗಳೂರು ಪೊಲೀಸರು ಅನುಸರಿಸಿದ್ದು, ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಬಂಕ್ಗಳು ಪೆಟ್ರೋಲ್ ನೀಡಬಾರದು ಎಂಬ ನಿಯಮವನ್ನು ಜಾರಿಗೊಳಿಸಿದ್ದಾರೆ. ಈಗಾಗಲೇ ಈ ನಿಯಮ ನೆರೆಯ ಕೇರಳ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಅನುಷ್ಠಾನದಲ್ಲಿದೆ.
ಸವಾರರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಆಗಸ್ಟ್ 5 ರಿಂದ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮ ಜಾರಿಗೆ ಬರಲಿದೆ. ನಾವು ಶನಿವಾರ (ಆಗಸ್ಟ್ 3)ರಂದು ಪೆಟ್ರೋಲ್ ಪಂಪ್ಗಳ ಮಾಲೀಕರೊಂದಿಗೆ ಸಭೆ ನಡೆಸುತ್ತೇವೆ ಮತ್ತು ಸೋಮವಾರದಿಂದ (ಆಗಸ್ಟ್ 5) ನಿಯಮವನ್ನು ಜಾರಿಗೆ ತರಲು ಪ್ರಾರಂಭಿಸುತ್ತೇವೆ” ಎಂದು ಬೆಂಗಳೂರಿನ ಡಿಸಿಪಿ ಟ್ರಾಫಿಕ್ ಈಸ್ಟ್ ಕೆ.ವಿ.ಜಗದೀಶ್ ಹೇಳಿದ್ದಾರೆ.
ಪೆಟ್ರೋಲ್ ಪಂಪ್ ಉದ್ಯೋಗಿಗಳಿಗೆ ದಂಡ ವಿಧಿಸುವ ನಿಬಂಧನೆಗಳು ಇರುವುದಿಲ್ಲವಾದ್ದರಿಂದ ಪೊಲೀಸರು, ಒಳ್ಳೆಯ ಕಾರಣಕ್ಕಾಗಿ ಸಾಮಾಜಿಕ ಸಹಕಾರವನ್ನು ಅವರಿಂದ ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಸವಾರರು ಮತ್ತು ಹಿಂಬದಿ ಸವಾರರಿಗಾಗಿ ಹೆಲ್ಮೆಟ್ ಅನ್ನು ಕಡ್ಡಾಯ ಮಾಡಿದ್ದರೂ ಕೂಡ ದ್ವಿಚಕ್ರ ವಾಹನ ಬಳಕೆದಾರರು ಮಾರಣಾಂತಿಕ ರಸ್ತೆ ಅಪಘಾತಗಳಿಗೆ ಒಳಗಾಗುತ್ತಿರುವ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತಿದೆ. ಕಡ್ಡಾಯ ಹೆಲ್ಮೆಟ್ ನಿಯಮವನ್ನು ಪಾಲನೆ ಮಾಡದೇ ಇರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ದ್ವಿಚಕ್ರ ವಾಹನ ಅಪಘಾತಗಳಲ್ಲಿ ಸಾವಿನ ಸಂಖ್ಯೆ 2017 ರಲ್ಲಿ 140 ರಿಂದ 2018 ರಲ್ಲಿ 150 ಕ್ಕೆ ಏರಿದೆ ಎಂದು ಪೊಲೀಸರ ಅಂಕಿಅಂಶಗಳು ತಿಳಿಸಿವೆ. 2019 ರಲ್ಲಿ ಸಾವುಗಳ ಸಂಖ್ಯೆ ಈಗಾಗಲೇ ಜುಲೈ ವರೆಗೆ 105 ಕ್ಕೆ ತಲುಪಿದೆ. ಗಾಯಗೊಳ್ಳುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗುತ್ತಿದೆ ಎಂದು ವರದಿ ಹೇಳುತ್ತದೆ.
ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮವು ಆಗಸ್ಟ್ 2016 ರಿಂದ ಕೇರಳದಲ್ಲಿ ಮತ್ತು ಸೆಪ್ಟೆಂಬರ್ 2017 ರಿಂದ ಆಂಧ್ರಪ್ರದೇಶದಲ್ಲಿ ಜಾರಿಗೆ ಬಂದಿದೆ. ರಾಜ್ಯಸಭೆಯಲ್ಲಿ 2019 ರ ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ ಅಂಗೀಕಾರದ ನಂತರ ವಿವಿಧ ಸಂಚಾರ ಉಲ್ಲಂಘನೆಗಳಲ್ಲಿ ದಂಡದ ಪ್ರಮಾಣ ಹೆಚ್ಚಳವಾಗಿದೆ ಎಂಬುದು ಗಮನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.