ನವದೆಹಲಿ : ಸಾಮಾಜಿಕ – ಆರ್ಥಿಕ ಜನಗಣತಿಯನ್ನು ಕೇಂದ್ರ ಸರಕಾರ ಶುಕ್ರವಾರ ಬಿಡುಗಡೆ ಮಾಡಿದೆ. ಈ ಜನಗಣತಿ ಮುಖಾಂತರ ಸರಕಾರಕ್ಕೆ ಬಡತನದ ಮುಖ್ಯ ಕಾರಣಗಳನ್ನು ಅಧ್ಯಯನ ಮಾಡಲು ಸಹಕಾರಿ. ಅಲ್ಲದೆ ಈ ಜನಗಣತಿಯು ಜನರ ಪ್ರತಿ ಮನೆಯ ಪ್ರಗತಿಯನ್ನು ಅರಿಯಲು ಸಹಕಾರಿಯಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಈ ಮೂಲಕ ಸರಕಾರ ಜನರಿಗೆ ಬೇಕಾದ ಯೋಜನೆಗಳನ್ನು ಸೂಕ್ತ ರೂಪದಲ್ಲಿ ರಚಿಸಲು ಸಹಾಯವಾಗುದಲ್ಲದೆ, ಸರಕಾರದ ಪ್ರಸಕ್ತ ಯೋಜನೆಗಳಾದ ರಾಷ್ಟ್ರೀಯ ವಸತಿ ಮಿಷನ್, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಉದ್ಯೋಗ ಖಾತ್ರಿ ಯೋಜನೆ ಮತ್ತು ಇಂದಿರಾ ಆವಾಜ್ ಯೋಜನೆಗಳನ್ನು ಯೋಗ್ಯ ರೀತಿಯಲ್ಲಿ ಜನರಿಗೆ ತಲುಪಿವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಎಂದು ಎಂದರು.
ಸರಕಾರಕ್ಕೆ ಪ್ರತಿ ಮನೆಗಳ ಪ್ರಗತಿಯ ದಾಖಲೆಗಳನ್ನು ತಿಳಿದುಕೊಳ್ಳಲು ಜನಗಣತಿಯನ್ನು ಬಳಸಲಾಗುವುದು ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ಬೀರೇಂದರ್ ಸಿಂಗ್ ಹೇಳಿದರು.
ಈ ಹಿಂದೆ ಸರಕಾರ 50ಸಾವಿರ ಮೇಲ್ಪಟ್ಟ ಯಾವುದೇ ವ್ಯವಹಾರಕ್ಕೆ ಪಾನ್ಕಾರ್ಡ್ನ್ನು ಕಡ್ಡಾಯಗೊಳಿಸಿತ್ತು. ಅಲ್ಲದೇ ಕೇಂದ್ರ ಸರಕಾರವು ಇದರ ಮಿತಿಯನ್ನು 25ಸಾವಿರಕ್ಕೆ ಇಳಿಸಲಿದೆ ಎಂಬ ಮಾತುಗಳು ಕೇಳಿಬಂದಿತ್ತು. ಈ ನಿಟ್ಟಿನಲ್ಲೂ ಸರಕಾರಕ್ಕೆ ಈ ಜನಗಣತಿ ಸಹಕಾರಿಯಾಗುವುದೇ ಎಂದು ಕಾದು ನೋಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.