ಬೆಂಗಳೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ವತಿಯಿಂದ ಇಬ್ಬರು ಖ್ಯಾತ ಪತ್ರಕರ್ತರಾದ ರೋಹಿತ್ ಚಕ್ರತೀರ್ಥ ಮತ್ತು ಸಂತೋಷ್ ತಮ್ಮಯ್ಯ ಅವರಿಗೆ ನಾರದ ಜಯಂತಿ ನಿಮಿತ್ತ ಕೊಡುವ ತಿ.ತಾ. ಶರ್ಮ ಮತ್ತು ಬೆ. ಸು. ನಾ. ಮಲ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಮೇ.20ರಂದು ನಾರದ ಜಯಂತಿಯ ಆಚರಣೆಯ ಸಂದರ್ಭದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಇಬ್ಬರು ಪ್ರಮುಖ ಪತ್ರಕರ್ತರಿಗೆ ನಾರದ ಪ್ರಶಸ್ತಿ ಪ್ರದಾನಿಸುವ ಘೋಷಣೆಯನ್ನು ಮಾಡಲಾಗಿದೆ. ದಿವಂಗತ ತಿ.ತಾ ಶರ್ಮಾ ಅವರ ಸ್ಮರಣಾರ್ಥ ರೋಹಿತ್ ಚಕ್ರತೀರ್ಥ ಅವರಿಗೆ ಮತ್ತು ಬಿ ಎಸ್ ಎನ್ ಮಲ್ಯ ಅವರ ಸ್ಮರಣಾರ್ಥ ಸಂತೋಷ್ ತಮ್ಮಯ್ಯ ಅವರಿಗೆ ‘ನಾರದ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ.
ರೋಹಿತ್ ಚಕ್ರತೀರ್ಥ ಉಡುಪಿ ಮೂಲದವರಾಗಿದ್ದು, ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಪದವಿಯನ್ನು ಪಡೆದುಕೊಂಡಿದ್ದಾರೆ, ವಿಶ್ವವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಿಗೆ, ವಿಕ್ರಮ, ಕರ್ಮವೀರ ವಾರಪತ್ರಿಕೆಗಳಿಗೆ ಅವರು ನಿರಂತರವಾಗಿ ಅಂಕಣಗಳನ್ನು ಬರೆಯುತ್ತಾರೆ. ಕನ್ನಡಪ್ರಭ, ಹೊಸದಿಗಂತ, ಜನಮಾಧ್ಯಮ ಮುಂತಾದ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟಗೊಳ್ಳುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ಇವರು, ಈಗಾಗಲೇ 20 ಪುಸ್ತಕಗಳನ್ನು ಬರೆದಿದ್ದಾರೆ.
ಸಂತೋಷ್ ತಮ್ಮಯ್ಯ ಕೊಡಗು ಜಿಲ್ಲೆಯವರಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. 2003ರಲ್ಲಿ ಅಸೀಮಾ ಕನ್ನಡ ರಾಷ್ಟ್ರವಾದಿ ಮಾಸಿಕದಲ್ಲಿ ಸಂಪಾದಕರಾಗಿ ಸೇರಿದ ಇವರು, 2008ರಲ್ಲಿ ಅಸೀಮಾದ ಮುಖ್ಯ ಸಂಪಾದಕರಾದರು. ರಾಷ್ಟ್ರೀಯ ಹಿತಾಸಕ್ತಿಯ, ರಾಜಕೀಯ ಮುಂತಾದ ವಿಷಯಗಳ ಬಗ್ಗೆ ಇವರು ಹೊಸದಿಗಂತ ಮತ್ತು ಇತರ ದಿನಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾರೆ. ಈಗಾಗಲೇ ನಾಲ್ಕು ಪುಸ್ತಕಗಳನ್ನು ಇವರು ಬರೆದಿದ್ದಾರೆ,
ನಾರದ ಜಯಂತಿಯನ್ನು ಮೇ.20ರಂದು ಆಚರಣೆ ಮಾಡಲಾಗಿದೆ. ‘ನಾರದ ಪ್ರಶಸ್ತಿ’ಯನ್ನು ಈ ಇಬ್ಬರು ಸಾಧಕರಿಗೆ ಜೂನ್ 23ರಂದು ಪ್ರದಾನಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.