ಅಬುಧಾಬಿ : ಸಾಂಸ್ಕೃತಿಕ ಸೌಂದರ್ಯ ಮತ್ತು ಧಾರ್ಮಿಕ ನಂಬಿಕೆಗಳಿಂದ ವಿಶ್ವದ ಗಮನ ಸೆಳೆದಿರುವ ಭಾರತ ಸಂಪ್ರದಾಯ ಅಸ್ತಿತ್ವಕ್ಕೆ ಒಂದು ದೊಡ್ಡ ಉದಾಹರಣೆ ಎನಿಸಿಕೊಂಡಿದೆ. ಇದೀಗ ಅಂತರಾಷ್ಟ್ರೀಯ ಮಣ್ಣಿನಲ್ಲೂ ಹಿಂದೂ ಸಂಸ್ಕೃತಿ ತನ್ನ ಛಾಪು ಮೂಡಿಸುತ್ತಿದೆ. ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾದ ಅಬುದಾಭಿಯಲ್ಲಿ ಹಿಂದೂ ದೇಗುಲ ನಿರ್ಮಾಣವಾಗುತ್ತಿದೆ. ಇಂದು ಅಭಿದಾಬಿಯಲ್ಲಿನ ಹಿಂದೂ ದೇಗುಲಕ್ಕೆ ಶಿಲಾನ್ಯಾಸ ನೆರವೇರಿದೆ.
ದೇಗುಲವನ್ನು ನಿರ್ಮಾಣ ಮಾಡುತ್ತಿರುವ ಸ್ವಾಮಿನಾರಾಯಣ ಸಂಸ್ಥೆಯ ಆಧ್ಯಾತ್ಮ ಗುರು ಮಹಾಂತ ಸ್ವಾಮಿ ಮಹಾರಾಜ್ ಅವರು ಶಿಲಾನ್ಯಾಸ ಪ್ರಕ್ರಿಯೆಗಳಿಗೆ ನಿರ್ದೇಶನ ನೀಡಿದರು. ಪೂಜ್ಯ ಈಶ್ವರ್ ಚರಣ್ ಸ್ವಾಮಿ ಅವರು ಶಿಲಾನ್ಯಾಸ ವಿಧಿವಿಧಾನಗಳನ್ನು ಪೂರೈಸಿದರು. ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟ ಮಕ್ಕಳು ಹೂವಿನ ಸ್ವಾಗತವನ್ನು ಕೋರಿದರು. ಸಂಸ್ಕೃತ ಮಂತ್ರಘೋಷಗಳು ಮೊಳಗಿದವು. ಶಿಲಾನ್ಯಾಸ ನೆರವೇರಿಸಲು ಗುಲಾಬಿ ಬಣ್ಣದ ಮಣ್ಣಿನ ಕಲ್ಲನ್ನು ಬಳಕೆ ಮಾಡಲಾಯಿತು. ರಾಜಸ್ಥಾನದಿಂದ ಈ ಕಲ್ಲನ್ನು ಕೊಂಡೊಯ್ಯಲಾಗಿತ್ತು.
ದೇಗುಲದ ಆವರಣವು ಸಾಂಸ್ಕೃತಿಕ ಮತ್ತು ಇತರ ಸೌಲಭ್ಯಗಳನ್ನು ಹೊಂದಲಿದೆ. ದೇಗುಲ ನಿರ್ಮಾಣಕ್ಕೆ 2,500 Dh ಅಥವಾ 5,000 Dh ನೀಡಿದವರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಾಸ್ಗಳನ್ನು ನೀಡಲಾಗಿತ್ತು. ಯಜಮಾನ್ ಸೇವಾ ರೂಪದಲ್ಲಿ ಹಲವಾರು ಮಂದಿ ಭಾರತೀಯರು ದೇಗುಲ ನಿರ್ಮಾಣಕ್ಕೆ ಧನ ಸಹಾಯವನ್ನು ಮಾಡಿದ್ದಾರೆ.
ಯುಎಇ ವಿದೇಶಾಂಗ ವ್ಯವಹಾರಗಳ ಮತ್ತು ಅಂತರಾಷ್ಟ್ರೀಯ ಸಹಕಾರ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಸೌಹಾರ್ದ ಸಚಿವ ಶೇಖ್ ನೆಹ್ಯನ್ ಮುಬಾರಕ್ ಅಲ್ ನಹ್ಯಾನ್ ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಾಮಾಜಿಕ ಆಧ್ಯಾತ್ಮಿಕ ಸೇರಿದಂತೆ ವಿವಿಧ ವಲಯಗಳ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ದೇಗುಲದಲ್ಲಿ ಸಾಂಸ್ಕೃತಿಕ ಆವರಣ, ಆರ್ಟ್ ಗ್ಯಾಲರಿ, ಲೈಬ್ರರಿ ಮತ್ತು ಜಿಮ್ಗಳು ನಿರ್ಮಾಣವಾಗಲಿದೆ. ಯುಎಇಯ 7 ಎಮಿರೇಟ್ಸ್ಗಳನ್ನು ಪ್ರತಿನಿಧಿಸುವ ಸಲುವಾಗಿ ದೇಗುಲದಲ್ಲಿ 7 ಟವರ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
14 ಎಕರೆ ಪ್ರದೇಶದಲ್ಲಿ ಈ ದೇಗುಲ ನಿರ್ಮಾಣವಾಗುತ್ತಿದೆ. ಯುಎಇಯಲ್ಲಿ ನೆಲೆಸಿರುವ ಭಾರತೀಯ ಶಿಲ್ಪಿಗಳು ದೇಗುಲ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇಗುಲ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.