ಮೈಸೂರಿನ ನವೋ-ಪ್ರಮತಿ ಕೇಂದ್ರದಲ್ಲಿ ತರಬೇತಿ ಪಡೆದ ಹದಿನೈದು ಮಂದಿ ಈ ಬಾರಿ ಉತ್ತಮ ರ್ಯಾಂಕ್ ನೊಂದಿಗೆ ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು,ದೆಹಲಿ ಮುಂತಾದ ದೊಡ್ಡ ದೊಡ್ಡ ನಗರಗಳಿಗೆ ತೆರಳಿ ದೊಡ್ಡ ಮೊತ್ತದ ಶುಲ್ಕ ತೆತ್ತು ತರಬೇತಿ ಪಡೆಯಲು ಸಾಧ್ಯವಿಲ್ಲದ ರಾಜ್ಯದ ಎಲ್ಲ ಪ್ರದೇಶಗಳ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬಯಸುವ ಅಭ್ಯರ್ಥಿಗಳಿಗಾಗಿ, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗಾಗಿ ಮೂರು ವರ್ಷಗಳ ಹಿಂದೆ ಪ್ರಾರಂಭವಾದ ನವೋ ಪ್ರಮತಿ ನಾಗರೀಕ ಸೇವಾ ತರಬೇತಿ ಶಾಲೆಯು IAS, IPS, IRS, IES, IFS ಮತ್ತು KAS ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಪ್ರತಿ ವರ್ಷವೂ ಲಿಖಿತ ಪರೀಕ್ಷೆಯ ಮೂಲಕ ನೂರು ಜನರನ್ನು ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳುವ ಸಂಸ್ಥೆಯು ದಕ್ಷ ಐ ಪಿ ಎಸ್ ಅಧಿಕಾರಿ ಎಂದೇ ಹೆಸರಾಗಿರುವ ಶ್ರೀ ರವಿ ಡಿ.ಚನ್ನಣ್ಣವರ್ ಅವರ ಮಾರ್ಗದರ್ಶನದ ಜೊತೆಗೆ ದೆಹಲಿ,ಹೈದರಾಬಾದ್,ಬೆಂಗಳೂರುಗಳ ಅತ್ಯುತ್ತಮ ಬೋಧಕರಿಂದ ತರಬೇತಿ ಕೊಡಿಸುತ್ತಿದೆ. ಆದ್ದರಿಂದಲೇ ಮೊದಲ ವರ್ಷದಲ್ಲಿ ಮೂರು ಸಾವಿರವಿದ್ದ ಆಕಾಂಕ್ಷಿ ಅಭ್ಯರ್ಥಿಗಳ ಸಂಖ್ಯೆಯು ನಂತರದಲ್ಲಿ ಎಂಟು ಸಾವಿರದ ವರೆಗೆ ತಲುಪಿದೆ.
ವ್ಯವಸ್ಥಿತ ತರಬೇತಿ ಕೊಠಡಿಗಳು, 24/7 ಬಳಸಿಕೊಳ್ಳಬಹುದಾದ ಸುಸಜ್ಜಿತ ವಾಚನಾಲಯ ಸೇರಿದಂತೆ ಅತ್ಯುತ್ತಮ ಸೌಲಭ್ಯಗಳನ್ನು ಸಂಸ್ಥೆಯು ಅಭ್ಯರ್ಥಿಗಳಿಗೆ ಒದಗಿಸುತ್ತಿದೆ. 2020 ರ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಧ್ಯದಲ್ಲೇ ಆರಂಭವಾಗಲಿರುವ ತರಬೇತಿಗೆ ಪ್ರವೇಶ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಇದೇ ಏಪ್ರಿಲ್ 20 ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಸಂಸ್ಥೆಯ ನಾಲ್ಕನೇ ಆವೃತ್ತಿಯ ತರಬೇತಿಗಾಗಿ ಲಿಖಿತ ಪರೀಕ್ಷೆಯು ಇದೇ ದಿನಾಂಕ 28-04-2019 ರಂದು ನಡೆಯಲಿವೆ.
ಆಸಕ್ತ ಅಭ್ಯರ್ಥಿಗಳು http://www.navodayafoundation.in/registration ಮೂಲಕ ನೋಂದಾಯಿಸಿಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.