ವಾಷಿಂಗ್ಟನ್ : ಭಾರತ ನಡೆಸಿರುವ ಉಪಗ್ರಹ ವಿರೋಧಿ ಕ್ಷಿಪಣಿ ಎಸ್ಯಾಟ್ ಪರೀಕ್ಷೆಯನ್ನು ಪೆಂಟಗಾನ್ ಸಮರ್ಥಿಸಿಕೊಂಡಿದ್ದು, ಬಾಹ್ಯಾಕಾಶದಲ್ಲಿನ ಬೆದರಿಕೆಗಳ ಬಗ್ಗೆ ಭಾರತಕ್ಕೆ ಕಾಳಜಿ ಇದೆ ಎಂದಿದೆ.
ಮಾರ್ಚ್ 27ರಂದು ಭಾರತವು ಕೆಳ ಭೂಸ್ತರದಲ್ಲಿದ್ದ ಗ್ರೌಂಡ್ ಟು ಸ್ಪೇಸ್ ಮಿಸೈಲ್ ಅನ್ನು ಎಸ್ಯಾಟ್ ಕ್ಷಿಪಣಿ ಮೂಲಕ ಹೊಡೆದುರುಳಿಸಿ ಇತಿಹಾಸವನ್ನು ನಿರ್ಮಾಣ ಮಾಡಿತ್ತು . ಈ ಪರೀಕ್ಷೆಯು ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಭಾರತವನ್ನು ನಾಲ್ಕನೆಯ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿಸಿತು.
ಭಾರತ ನಡೆಸಿದ ಈ ಪರೀಕ್ಷೆಗೆ ನಾಸಾ ಅಪಸ್ವರವನ್ನು ಎತ್ತಿತ್ತು, ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ 400 ಚೂರುಗಳಾಗಿ ಇದು ಭವಿಷ್ಯದಲ್ಲಿ ಗಗನ ಯಾತ್ರೆಗಳಿಗೆ ತೊಂದರೆ ಕೊಡಲಿದೆ ಎಂದು ಹೇಳಿತ್ತು . ಆದರೆ ಭಾರತ ಇದನ್ನು ಅಲ್ಲಗಳೆದಿತ್ತು. ಇದೀಗ ಪೆಂಟಗನ್ ಕೂಡ ಭಾರತದ ಪರ ನಿಂತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಸ್ ಸ್ಟ್ರಾಟೆಜಿಕ್ ಕಮಾಂಡ್ ಕಮಾಂಡರ್ ಜನರಲ್ ಜಾನ್ ಈ ಹೈಟನ್ ಅವರು, ಭಾರತವು ಯಾಕೆ ಎಸ್ಯಾಟ್ ಅನ್ನು ಪರೀಕ್ಷಿಸಿತು ಎಂಬುದು ಅತ್ಯಂತ ಸರಳ ಪ್ರಶ್ನೆ, ಎಲ್ಲಾ ಸಮಿತಿಗಳು ಇದರತ್ತವೇ ನೋಡುತ್ತಿವೆ. ಬಾಹ್ಯಾಕಾಶದಲ್ಲಿನ ಸವಾಲುಗಳ ಬಗ್ಗೆ ಭಾರತ ಹೆಚ್ಚು ಕಾಳಜಿಯನ್ನು ಹೊಂದಿದೆ, ಆದುದರಿಂದಲೇ ಈ ಪರೀಕ್ಷೆಯನ್ನು ನಡೆಸಿದೆ ಎಂದು ಸೆನೆಟ್ನನ ಆರ್ಮ್ಡ್ ಸರ್ವಿಸಸ್ ಕಮಿಟಿಗೆ ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಸವಾಲುಗಳು ಇರುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥರಾಗಿದ್ದು ಅನಿವಾರ್ಯ ಎಂಬುದು ಅವರ ಭಾವನೆಯಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.