ನವದೆಹಲಿ: ಭಯೋತ್ಪಾದನೆಗೆ ಹಣ ಹರಿದು ಬರುವುದನ್ನು ತಡೆಗಟ್ಟುವ ಸಲುವಾಗಿ, ಜಾರಿ ನಿರ್ದೇಶನಾಲಯ (ED) ಹಣಕಾಸು ವಂಚನೆ ಕಾಯ್ದೆ 2002(ಪಿಎಂಎಲ್ಎ) ಅಡಿಯಲ್ಲಿ ಮೊಹಮ್ಮದ್ ಶಾಫಿ ಶಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಇತರ ಆರು ಉಗ್ರರಿಗೆ ಸಂಬಂಧಿಸಿದ ರೂ.1.22 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ. ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಈ ಆಸ್ತಿಗಳು ಇವೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಮೊಹಮ್ಮದ್ ಸೈಯದ್ ಸಲಾಹುದ್ದೀನ್ ಮತ್ತು ಇತರರ ವಿರುದ್ಧ ಪ್ರಸ್ತುತ ನಡೆಯುತ್ತಿರುವ ವಿಚಾರಣೆಯ ಭಾಗವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಲವಾರು ಹೆಸರುಗಳನ್ನು ಹೊಂದಿರುವ ಮೊಹಮ್ಮದ್ ಶಾಫಿ ಮತ್ತು ಇತರ ಆರು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದೆ. ಇದರ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಹಣಕಾಸು ವಂಚನೆಯಡಿ ತನಿಖೆಯನ್ನು ಆರಂಭಿಸಿದೆ.
‘ಹಿಜ್ಬುಲ್ ಮುಜಾಹಿದ್ದೀನ್ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದನಾ ಸಂಘಟನೆಯಾಗಿದೆ, ಇದು ಭಯೋತ್ಪಾದಕರಿಗೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಇದರ ನೇತೃತ್ವವನ್ನು ವಹಿಸಿರುವ ಸೈಯದ್ ಸಲಾಹುದ್ದೀನ್, ಪಾಕಿಸ್ಥಾನದ ರಾವಲ್ಪಿಂಡಿ ಮೂಲದ ಸ್ವಯಂಘೋಷಿತ ಕಮಾಂಡರ್ ಆಗಿದ್ದಾನೆ. ಈ ಸಂಘಟನೆ ಭಾರತದ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ‘ಜಮ್ಮು ಆ್ಯಂಡ್ ಕಾಶ್ಮೀರ್ ಅಫೆಕ್ಟೀಸ್ ರಿಲೀಫ್ ಫಂಡ್’ ಎಂಬ ಟ್ರಸ್ಟ್ ಮೂಲಕ ಹಣಕಾಸು ನೆರವು ನೀಡುತ್ತದೆ. ಐಎಸ್ಐ ಮತ್ತು ಪಾಕಿಸ್ಥಾನ ಮೂಲಕ ಸಂಸ್ಥೆಗಳು ಇದಕ್ಕೆ ಹಣ ನೀಡುತ್ತವೆ’ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತಕ್ಕೆ ಹಣವನ್ನು ಹವಾಲ, ವಿನಿಮಯ ವ್ಯಾಪಾರ, ಮಾನವ ಸಾಗಾಣೆಯ ಮೂಲಕ ರವಾನೆ ಮಾಡಲಾಗುತ್ತದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ರವಾನೆಯಾದ ಹಣವನ್ನು ಮತ್ತೆ ಅದೇ ರೀತಿಯ ಕಾನೂನು ಬಾಹಿರ ವ್ಯವಹಾರಗಳ ಮೂಲಕ ಉಗ್ರರಿಗೆ ಹಂಚಿಕೆ ಮಾಡಲಾಗುತ್ತದೆ.
ಕಾನೂನು ಬಾಹಿರವಾಗಿ ಹಣವನ್ನು ಉಗ್ರರಿಗೆ ಹಂಚಿಕೆ ಮಾಡುವುದರಲ್ಲಿ ಮಾಸ್ಟರ್ ಮೈಂಡ್ ಎನಿಸಿರುವ ಮೊಹಮ್ಮದ್ ಶಾ ಶಾಫಿ ಅಲಿಯಾಸ್ ಡಾಕ್ಟರ್ ಅಲಿಯಾಸ್ ತಲಿಬ್ ಲಾಲಿ ಬಂಡೀಪೋರಾ ನಿವಾಸಿಯಾಗಿದ್ದು ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ಈತನೊಂದಿಗೆ ಮತ್ತೊಬ್ಬ ಉಗ್ರ, ಅನಂತ್ ನಾಗ್ ನಿವಾಸಿ ಮುಸ್ತಖ್ ಅಹ್ಮದ್ ಲೋನ್ ಕೂಡ ಅದೇ ಜೈಲಿನಲ್ಲಿದ್ದಾನೆ.
ED attaches under PMLA, 13 properties in J&K worth Rs 1.22 crore owned by Mohammad Shafi Shah and others of Hizb-Ul-Mujahideen in terror financing case against Mohd. Syed Salahuddin (Commander of Hizb-ul-Mujhahideen).
— ED (@dir_ed) March 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.