ನವದೆಹಲಿ: ಉತ್ತರಪ್ರದೇಶದ ಚಿತ್ರಣವನ್ನು ನಮ್ಮ ಸರ್ಕಾರ ಬದಲಾಯಿಸಿದೆ. ಕಳೆದ ಎರಡು ವರ್ಷಗಳಲ್ಲಿ ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ದೇಶಕ್ಕೇ ಮಾದರಿ ಎನಿಸಿದೆ. ನಾವು ಆಡಳಿತಕ್ಕೆ ಬಂದ ಬಳಿಕ ಒಂದೇ ಒಂದು ಗಲಭೆಗಳು ನಡೆದಿಲ್ಲ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ತಮ್ಮ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ತಮ್ಮ ಸಾಧನೆಗಳ ವರದಿಯನ್ನು ಒಪ್ಪಿಸಿದ ಅವರು, ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಲದ ಹೊರೆ ತಾಳಲಾರದೆ ರೈತರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದರು, ಕೊಲೆ, ಸುಲಿಗೆ, ದಂಗೆಗಳಿಂದ ರಾಜ್ಯ ತುಂಬಿ ಹೋಗಿತ್ತು. ನಾವು ಕಾರ್ಯೋನ್ಮುಖರಾಗಿ ಕಾನೂನು ಸುವ್ಯವಸ್ಥೆಯನ್ನು ಹದ್ದುಬಸ್ತಿಗೆ ತಂದಿದ್ದೇವೆ, ಗೂಂಡಾ ಸಂಸ್ಕೃತಿಗೆ ಇತಿಶ್ರೀ ಹಾಡಿದ್ದೇವೆ ಎಂದರು.
‘ಬಹುಜನ ಸಮಾಜವಾದಿ ಮತ್ತು ಸಮಾಜವಾದಿ ಪಕ್ಷಗಳ ಆಡಳಿತದಲ್ಲಿ ಗೂಂಡಾಗಿರಿ ಸಾಮಾನ್ಯವಾಗಿತ್ತು. ಎಲ್ಲೆಲ್ಲೂ ಲೂಟಿ, ದರೋಡೆಗಳೇ ನಡೆಯುತ್ತಿತ್ತು. ಹಗರಣಗಳ ದೊಡ್ಡ ಚರಿತ್ರೆಯೇ ಇವರ ಆಡಳಿತದ ಇತಿಹಾಸದಲ್ಲಿದೆ. ಈಗ ನಾವು ರಾಜ್ಯದ ಚಿತ್ರಣವನ್ನು ಬದಲಾಯಿಸಿದ್ದೇವೆ. ಈಗ ಇಲ್ಲಿನ ಉತ್ತಮ ಪರಿಸರ ದೇಶಕ್ಕೆ ಮಾದರಿ ಎನಿಸುವ ರೀತಿಯಲ್ಲಿ ಇದೆ’ ಎಂದಿದ್ದಾರೆ.
ಹಿಂದಿನ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ‘2012ರಲ್ಲಿ 277 ಕೋಮು ಗಲಭೆಗಳನ್ನು ಸಂಭವಿಸಿವೆ. 2013ರಲ್ಲಿ 247 ಗಲಭೆಗಳು ಸಂಭವಿಸಿವೆ. 2014ರಲ್ಲಿ 242 ಗಲಭೆಗಳು, 2015ರಲ್ಲಿ 219 ಗಲಭೆಗಳು ನಡೆದಿವೆ. 2016ರಲ್ಲಿ 100ಕ್ಕೂ ಅಧಿಕ ಗಲಭೆ ನಡೆದಿದೆ. ಈ ಎಲ್ಲಾ ಗಲಭೆಗಳಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಗಳು ನಾಶವಾಗಿವೆ. ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಒಂದೇ ಒಂದು ಗಲಭೆಗಳು ನಡೆದಿಲ್ಲ. ಆ್ಯಸಿಡ್ ದಾಳಿ, ಅಪಹರಣದಂತಹ ಪ್ರಕರಣಗಳೂ ನಡೆದಿಲ್ಲ’ ಎಂದಿದ್ದಾರೆ.
ಅಪರಾಧ ಮತ್ತು ಅಪರಾಧಿಗಳ ಬಗ್ಗೆ ನಮ್ಮ ಸರ್ಕಾರ ಶೂನ್ಯ ಸಹನೆಯನ್ನು ಹೊಂದಿದೆ. ಎನ್ಕೌಂಟರ್ ನಡೆಸಿ 73 ಅಪರಾಧಿಗಳನ್ನು ಹತ್ಯೆ ಮಾಡಲಾಗಿದೆ. ಈ ವೇಳೆ 6 ಮಂದಿ ಪೊಲೀಸರೂ ಹುತಾತ್ಮರಾಗಿದ್ದಾರೆ ಎನ್ನಲು ದುಃಖಪಡುತ್ತೇವೆ ಎಂದಿದ್ದಾರೆ.
ಮೊತ್ತ ಮೊದಲ ಬಾರಿಗೆ 2018ರಲ್ಲಿ ಉತ್ತರಪ್ರದೇಶ ಸಂಸ್ಥಾಪನ ದಿನವನ್ನು ನಮ್ಮ ಸರ್ಕಾರ ಆಚರಣೆ ಮಾಡಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.