ನವದೆಹಲಿ: ಜಮ್ಮು ಕಾಶ್ಮೀರ ಸರ್ಕಲ್ನ ಪೋಸ್ಟ್ಮಾಸ್ಟರ್ ಪಿ.ಡಿ ಶೆರಿಂಗ್ ಅವರು, ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಅಲ್ಟರ್ನೇಟಿವ್ಸ್ ಲಡಾಖ್ನ ಸಂಸ್ಥಾಪಕ ಸೋನಮ್ ವಾಂಗ್ಚುಕ್ ಅವರ ಜೊತೆಗೂಡಿ ಲೇಹ್ನ ಹಿಮಾಲಯದಲ್ಲಿ ಐಸ್ ಸ್ತೂಪದ ಚಿತ್ರವುಳ್ಳ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
ಹಿಮಗಳು ಕರಗುತ್ತಿರುವ ಬಗ್ಗೆ ಮತ್ತು ಹಿಮಾಲಯದ ಸುತ್ತಲಿನ ಪರಿಸರ ವ್ಯವಸ್ಥೆ ತೀವ್ರವಾಗಿ ಹದಗೆಡುತ್ತಿರುವ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಲಾಗಿದೆ.
ಲಡಾಖ್ನಲ್ಲಿನ ಸುಮಾರು 12 ಗ್ರಾಮಗಳ ಜನರು ವಿವಿಧ ಗ್ರಾಮಗಳಲ್ಲಿ ಐಸ್ ಸ್ತೂಪಗಳನ್ನು ಈ ವರ್ಷ ನಿರ್ಮಾಣ ಮಾಡಲಿದ್ದಾರೆ.
ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಅಲ್ಟರ್ನೆಟಿವ್ಸ್ ಲಡಾಖ್(ಎಚ್ಐಎಎಲ್) ಇವರಿಗೆ ತಾಂತ್ರಿಕ ಮತ್ತು ಸಾಮಾಗ್ರಿಗಳ ಸಹಕಾರವನ್ನು ಒದಗಿಸಿದೆ. ಈ ಐಸ್ ಸ್ತೂಪ ನಿರ್ಮಾಣದಲ್ಲಿ ಗ್ರಾಮದ ಯುವಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಈ ಕಾರ್ಯವನ್ನು ಇನ್ನಷ್ಟು ಉತ್ತೇಜಿಸಲು ಎಚ್ಐಎಎಲ್, ಐಸ್ ಸ್ತೂಪ ನಿರ್ಮಾಣದ ಸ್ಪರ್ಧೆಯನ್ನೂ ಏರ್ಪಡಿಸಿತ್ತು. ಇದರಲ್ಲಿ ಹಲವಾರು ಯುವಕರು ಭಾಗಿಯಾಗಿದ್ದಾರೆ.
ನಗರಗಳಲ್ಲಿ ಸರಳವಾದ ಜೀವನವನ್ನು ನಡೆಸಿದರೆ ಮಾತ್ರ ಹಿಮಾಲಯದ ಪರಿಸರ ವ್ಯವಸ್ಥೆ ಉಳಿಯಲು ಸಾಧ್ಯವಿದೆ ಎಂದು ರೋಮನ್ ಮ್ಯಾಗ್ಸಸೆ ಮತ್ತು ರೋಲೆಕ್ಸ್ ಪ್ರಶಸ್ತಿ ವಿಜೇತ ಸೋನಮ್ ವಾಂಗ್ಚುಕ್ ಅವರು ಅಭಿಪ್ರಾಯಿಸುತ್ತಾರೆ.
ಜಾಗತಿಕ ತಾಪಮಾನ, ಹವಮಾನ ವೈಪರೀತ್ಯ ಹಿಮಾಲಯಕ್ಕೆ ಭಾರೀ ಹೊಡೆತವನ್ನು ನೀಡುತ್ತಿದೆ. ಹೀಗಾಗಿ ಸ್ಟ್ಯಾಂಪ್ ಬಿಡುಗಡೆಯ ಮೂಲಕ ಈ ಬಗ್ಗೆ ಜನರಿಗೆ ಅರಿವನ್ನು ಮೂಡಿಸುವ ಕಾರ್ಯ ಮಾಡಲಾಗಿದೆ ಎಂದಿದ್ದಾರೆ.
ವ್ಯರ್ಥವಾಗಿ ಹರಿದು ಹೋಗುವ ಚಳಿಗಾಲದ ನೀರನ್ನು ಸಂರಕ್ಷಿಸಿ ಅದನ್ನು ಸ್ತೂಪಗಳನ್ನಾಗಿ ಮಾಡಲಾಗುತ್ತದೆ, ಈ ಸ್ತೂಪ ಅಷ್ಟು ಸುಲಭದಲ್ಲಿ ಕರಗುವುದಿಲ್ಲ. ಚಳಿಗಾಲದ ಬಳಿಕ ಇದನ್ನು ನೀರಾವರಿ, ಕುಡಿಯುವುದಕ್ಕೆ ಬಳಸಬಹುದಾಗಿದೆ.
ಒಂದೊಂದು ಸ್ತೂಪಗಳಿಂದ ಸುಮಾರು 30-50 ಲೀಟರ್ಗಳಷ್ಟು ನೀರು ಉಳಿತಾಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.