ಜಕಾರ್ತ: ಭಾರತ ಮತ್ತು ಇಂಡೋನೇಷ್ಯಾದ ನಡುವೆ ಆಪ್ತವಾದ ಸಾಗರ ಸಂಬಂಧವಿದೆ. ಈ ಸಂಬಂಧದ ಸಂಕೇತವಾಗಿ ಭಾರತದ ಕರಾವಳಿ ತಟ ರಕ್ಷಣಾ ಹಡಗು ‘ವಿಜಿತ್’ ಇಂಡೋನೇಷ್ಯಾದ ಸಬಾಂಗ್ಗೆ ಮಾ. 17-20 ರ ವರೆಗೆ ಭೇಟಿ ನೀಡಿದೆ. ಸಬಾಂಗ್ಗೆ ಭೇಟಿ ನೀಡಿದ ದೇಶದ ಮೊತ್ತ ಮೊದಲ ತಟ ರಕ್ಷಣಾ ಹಡಗು ಎಂಬ ಖ್ಯಾತಿಗೆ ಪಾತ್ರವಾಗಿದೆ. 2018ರ ಜುಲೈನಲ್ಲಿ ಭಾರತ ನೌಕಾ ಹಡಗು ಐಎನ್ಎಸ್ ಸುಮಿತ್ರಾ ಸಬಾಂಗ್ಗೆ ಭೇಟಿ ನೀಡಿದ ಮೊದಲ ನೌಕಾ ಹಡಗು ಎಂಬ ಕೀರ್ತಿಗೆ ಪಾತ್ರವಾಗಿತ್ತು.
ವಿಜಿತ್ ಹಡಗಿನ ಭೇಟಿ, ನವದೆಹಲಿ ಮತ್ತು ಜಕಾರ್ತದ ನಡುವೆ ಬಲಿಷ್ಠವಾಗಿ ವೃದ್ಧಿಯಾಗುತ್ತಿರುವ ಸಮುದ್ರ ಭದ್ರತೆ ಮತ್ತು ಸುರಕ್ಷತೆಯ ಸಹಕಾರವನ್ನು ತೋರಿಸುತ್ತದೆ. ತನ್ನ ಮೊತ್ತ ಮೊದಲ ಭೇಟಿಯಲ್ಲಿ ವಿಜಿತ್ನ ಸಿಬ್ಬಂದಿಗಳು ಇಂಡೋನೇಷ್ಯಾದ ತಟ ರಕ್ಷಣಾ ಪಡೆ, ಶಸ್ತ್ರಾಸ್ತ್ರ ಪಡೆ ಮತ್ತು ನಾಗರಿಕ ಆಡಳಿತದೊಂದಿಗೆ ಸಬಾಂಗ್ನಲ್ಲಿ ಚರ್ಚೆ ನಡೆಸಲಿದ್ದಾರೆ. ಈ ಬಗೆಗಿನ ಮಾಹಿತಿಯನ್ನು ಜಕಾರ್ತದಲ್ಲಿನ ಭಾರತೀಯ ರಾಯಭಾರ ಕಛೇರಿ ಪ್ರಕಟನೆಯ ಮೂಲಕ ನೀಡಿದೆ.
’ವಿಜಿತ್ ಹಡಗನ್ನು ಕಮಾಂಡೆಂಟ್ ಟಿ.ಆಶಿಸ್ ಕಮಾಂಡ್ ಮಾಡಲಿದ್ದಾರೆ. ಇವರು ಲಾಂಗ್ ನಾವಿಗೇಶನ್ ಡೈರೆಕ್ಷನ್ ಆಫಿಸರ್ ಆಗಿದ್ದಾರೆ. ವಿಜಯಶಾಲಿ ಎಂಬ ಅರ್ಥವನ್ನು ನೀಡುವ ’ವಿಜಿತ್’ ಹಡುಗು ಭಾರತದ ನೌಕಾನಿರ್ಮಾಣ ಸಾಮರ್ಥ್ಯದ ಸಾಕ್ಷಿ ಮತ್ತು ದೇಶದ ಸಮುದ್ರ ಹಿತಾಸಕ್ತಿಗಳನ್ನು ಕಾಪಾಡಲು ಭಾರತ ಸರ್ಕಾರ ಬದ್ಧತೆಯ ಸಂಕೇತವಾಗಿದೆ’ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
’ವಿಜಿತ್ ಹಡಗಿನಲ್ಲಿ 15 ಮಂದಿ ಅಧಿಕಾರಿಗಳು ಮತ್ತು 90 ಮಂದಿ ಅತ್ಯುತ್ಸಾಹದ, ಸಂಪೂರ್ಣ ತರಬೇತಿಯನ್ನು ಪಡೆದ ಸಿಬ್ಬಂದಿಗಳಿದ್ದಾರೆ. ’ವಯಂ ರಕ್ಷಮಃ’ ಎಂಬ ತಟ ರಕ್ಷಣಾ ಧ್ಯೇಯವನ್ನು ಪಾಲಿಸಲು ಇವರು ಸದಾ ಬದ್ಧರಾಗಿದ್ದಾರೆ’ ಎಂದು ತಿಳಿಸಿದೆ.
2393 ಟನ್ ಭಾರದೊಂದಿಗೆ 26 ನಾಟ್ಸ್ ಸ್ಪೀಡ್ಗೆ ಈ ಹಡಗನ್ನು ವಿನ್ಯಾಸಪಡಿಸಲಾಗಿದ್ದು, ಹೊಸ ಪೀಳಿಗೆಯ ಈ ಹಡಗು ಸುಧಾರಿತ ನ್ಯಾವಿಗೇಷನಲ್ ಮತ್ತು ಸಂವಹನ ಉಪಕರಣಗಳು, ಸಂವೇದಕಗಳು ಮತ್ತು ಯಂತ್ರೋಪಕರಣಗಳು, ಇಂಟಿಗ್ರೇಟೆಡ್ ಬ್ರಿಡ್ಜ್ ಸಿಸ್ಟಮ್ (IBS), ಇಂಟಿಗ್ರೇಟೆಡ್ ಮೆಷಿನರಿ ಕಂಟ್ರೋಲ್ ಸಿಸ್ಟರ್ (IMCS), ಪವರ್ ಮ್ಯಾನೇಜ್ಮೆಂಟ್ ಸಿಸ್ಟಮ್ (PMS), ಹೈ ಪವರ್ ಎಕ್ಸ್ಟರ್ನಲ್ ಫೈರ್ ಫೈಟಿಂಗ್ ಸಿಸ್ಟಮ್ (ABS Fi-Fi Class-1) ಮತ್ತು ಒಂದು ಸ್ಥಳೀಯ ಕ್ಲೋಸ್ ರೇಂಜ್ ನಾವೆಲ್ (CRN)ನೊಂದಿಗೆ 91 ಗನ್ ಮೌಂಟ್ ಮತ್ತು ಯುವಿ ಫೈರ್ ಕಂಟ್ರೋಲ್ ಸಿಸ್ಟಮ್ನ್ನು ಒಳಗೊಂಡಿದೆ.
Kapal Penjaga Pantai India pertama “VIJIT” tiba di Sabang (Indonesia) pada 17 Maret. Petugas dan kru akan mengadakan interaksi dengan BAKAMLA, TNI dan administrasi sipil Sabang. Satu langkah maju dalam implementasi “Visi Bersama Kerjasama Maritim di Indo Pasifik” pic.twitter.com/KN3Wg79PwP
— India in Indonesia (@IndianEmbJkt) March 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.